Thursday, 28 July 2011

ಅತೃಪ್ತಿ




ಬರೆಯಲು ಕುಳಿತೆನು ನಾನು
ಕಾಗದ ಲೇಖನಿಗಳ ಹುಡುಕಾಟದಲ್ಲಿ
ನನಗೆ ಹೊಳೆದ ಕವನದ ಸಾಲುಗಳೆಲ್ಲ
ಮಂಜಿನಂತೆ ಕರಗಿ ನೀರಾಗಿತ್ತು!!!!!

ಆದರೂ ಛಲ ಬಿಡದ ತ್ರಿವಿಕ್ರಮನಂತೆ
ಬರೆದೆ ಬರೆದೆ ಮತ್ತೂ ಬರೆದೆ ;
ಇನ್ನೂ ಬರೆಯುತ್ತಲಿದ್ದೇನೆ
ಆದರೆ ನನ್ನ ಕವನ ಗಳವೂವೂ
ನನಗೆ ಇನ್ನೂ ತೃಪ್ತಿ ತಂದಿಲ್ಲ!!!!! 

ಹಡೆದಮ್ಮ


'ಅಮ್ಮ' ನೀ ನನ್ನ ಹಡೆದಮ್ಮ
ಅಹುದು ನೀ ನನ್ನ
ನವಮಾಸಗಳು ಹೊತ್ತು ಹೆತ್ತು
ಸಾಕಿ ಸಲಹಿದ ಮಾತೆ !

ನವಮಾಸಗಳು ನಾ ನಿನ್ನ
ಗರ್ಭದಲ್ಲಿ ಹುದುಗಿ
ನಿನ್ನದೇ ತದ್ರೂಪು ಪಡೆದು
ಈ ಜಗಕ್ಕೆ ಅಡಿ ಇಟ್ಟೆ ನಮ್ಮ!

ನಾನೂ ಅಂಬೆಗಾಲಿಟ್ಟು ನಡೆಯುತ್ತಿದ್ದರೆ
ನೀ ನನ್ನ ಬಾಲ ಲೀಲೆಗಳನ್ನು ಕಂಡು
ಅದೆಷ್ಟು ಆನಂದ ಪಟ್ಟೆಯಮ್ಮ?

ನೀನೆನ್ನ ಪ್ರಥಮ ಗುರುವಾಗಿ
ಅಕ್ಷರಾಭ್ಯಾಸ ಕಲಿಸಿದೆ
ವಿದ್ಯೆ ಬುದ್ದಿಯನ್ನು ನೀಡಿ
ನನ್ನನ್ನು ಪದವೀಧರೆಯಾಗಿ ಮಾಡಿ
ನಾನೂ ಸರೀಕರೆದುರು ಘನತೆ-ಗೌರವದಿಂದ
ಬಾಳುವಂತೆ ಮಾಡಿ; ನಿನ್ನ ಈ ದೇಶಕ್ಕೆ
ನೀನು ಒಬ್ಬಳು ಸತ್ಪ್ರಜೆಯನ್ನು
ಉಡುಗೊರೆಯಾಗಿ ಕೊಟ್ಟೆಯಮ್ಮ!

ಹೇ ಮಾತೆ ಮುಂದಿನ ಜನ್ಮವೇನಾದರೂ
ನಾನು ಮತ್ತೆ ಜನ್ಮವೆತ್ತಿದ ಪಕ್ಷದಲ್ಲಿ
ಮತ್ತೆ ನಾನು ನಿನ್ನ ಮಗಳಾಗಿ ಜನಿಸಿ
ನಿನ್ನ ಪ್ರೀತಿಯ ಹೊಳೆಯಲ್ಲಿ
ಮೀಯುವಂತಾಗಬೇಕು
ಎಂಬುದೇ ನನ್ನ ಆಶಯವಮ್ಮ !

'ನಾಳೆ '



'ನಾಳೆ ' ಎಂಬುದು ಹಾಳು
ಸೋಮಾರಿಯಾಗದಿರಿ
ಇಂದಿನದು ಇಂದಿಗೆ
ನಾಳೆ ಎಂದೆನ್ನದಿರಿ !

ಇಂದಿನದು ಎಂದರೆ
ಈ ಘಳಿಗೆಯ ಕೆಲಸ
ಆ ಕ್ಷಣವೇ ಮಾಡಿದಿರೋ
ಬದುಕು ಸರಸ
ಇಲ್ಲವೇ ನೀರಸ !

ನಾಳೆ ಎಂಬುದೊಂದು
ದೊಡ್ಡ ಬ್ರಹ್ಮ ರಾಕ್ಷಸ
ಅದರ ಕೈಗೆನಾದರೂ
ನಿಮ್ಮ ಕೆಲಸ ಒಪ್ಪಿಸಿದಿರೋ ಜೋಕೆ !
ಅದರ ವಜ್ರ ಮುಷ್ಟಿಗೆ ಸಿಲುಕಿ
ನಿಮ್ಮ ಕೆಲಸ ಮುಂದುವರಿಯದೇ
ಹಾಗೆ ಉಳಿದು ಬಿಡುತ್ತದೆ !

ನಾಳೆ ಎಂಬುದರ ವಿನಾಶವೇ
ಇಂದು ನಮ್ಮೆಲ್ಲರ ಬಾಳಿಗೆ ಅತಿಶಯವೇ !


Wednesday, 27 July 2011

ಪ್ರೀತಿ




ಎಲ್ಲರನ್ನು ಪ್ರೀತಿ ಇಂದ ಕಾಣಿರಿ
ಎಲ್ಲರೂ ನಿಮ್ಮನ್ನು ಪ್ರೀತಿಸುವರು
ಖಗ-ಮೃಗ, ಪ್ರಾಣಿ-ಪಕ್ಷಿ ಗಳನ್ನೂ ಪ್ರೀತಿಸಿ
ಎಲ್ಲರ ಮೆಚ್ಚಿಗೆ ಪ್ರೀತಿಯೇ
ನಿಮ್ಮ ಜೀವನದ ಹಾದಿಗೆ ಬೆಳಕು :
ನಿಮ್ಮ ನಗು ಮುಖವೇ ನಿಮಗೆ ಶ್ರೀ ರಕ್ಷೆ
ನಿಮ್ಮ ಸೊರಗಿದ ಗಂಟು ಹಾಕಿದ ಮುಖವೇ
ನಿಮ್ಮ ನಾಶದ ನಿರೀಕ್ಷೆ !
ಕಷ್ಟವೇನೆ ಇರಲಿ ಬಾಳಿ ಮರೆತು
ಸಾಧಿಸಲು ಯತ್ನಿಸಿ ಏನಾದರು ಮತ್ತೂ :
ಕೊರಗಿ ಮರುಗದಿರಿ
ಮರುಗಿ ಸೊರಗದಿರಿ

ಸೊರಗಿ ಕೃಶವಾಗದಿರಿ
ಎಲ್ಲರನ್ನು ಪ್ರೀತಿ ಇಂದ ಕಾಣಿರಿ

ಕಲಿಗಾಲ




ಪ್ರಪಂಚವೆಂಬ ಸಂತೆಯಲ್ಲಿ
ಲಂಚಕೋರರ ಕಳ್ಳ ಸಂತೆಯಲ್ಲಿ
ಗೋಮುಖ ವ್ಯಾಘ್ರರಂತಿಲ್ಲಿ
ಮುಖವಾಡವ ಧರಿಸಿದರಿಲ್ಲಿ
ಬಾಳುವಿರಿ ಹಾಯಾಗಿ ನೀವಿಲ್ಲಿ :
ನ್ಯಾಯಕ್ಕೆ ಕಾಲವಲ್ಲವಿ ಕಲಿಗಾಲವು
ಅನ್ಯಾಯಕಿಹ ಬೆಲೆ ನ್ಯಾಯಕ್ಕಿಲ್ಲವು;
ಸತ್ಯ ಧರ್ಮ ನ್ಯಾಯಗಳೆಲ್ಲ
ಗೋಮುಖ ವ್ಯಾಘ್ರರ ಕಾಲ ಮೆಟ್ಟುಗಲಾಗಿಹವು 
ಅಂದು ಪುಣ್ಯಕೋಟಿ ನುಡಿಯಿತು
ಸತ್ಯವೇ ನಮ್ಮ ತಾಯಿ -ತಂದೆ
ಬಂಧು-ಬಳಗ ಸಕಲವೂ ಎಂದು
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಪರಮಾತ್ಮ ಮೆಚ್ಚನೆಂದು
ಪುಣ್ಯಕೋಟಿಯ ಮಾತು ಕೇಳಿ
ಅದರ ಸತ್ಯ ಸಂಧತೆಗೆ ಮೆಚ್ಚಿ
ಹುಲಿಯೇ ಪ್ರಾಣಾರ್ಪಣೆ ಮಾಡಿಕೊಂಡಿತು
ಆದರಿಂದು ಪುಣ್ಯ ಕೋಟಿಯಂಥ 
ಸತ್ಯ ಸಂಧರಿಗೆ ಸಿಗುತಿರುವ ಬೆಲೆ ?

ಬಡಪಾಯಿ

ಬಡಪಾಯಿ ನಾನು ಏನ ಮಾಡಲಿ ?




 ಸಿಡಿದು ನಿಂತಿಹೆ ನಾನು
ಸರ್ಕಾರದ ಕಾನೂನಿನ ರೀತಿಯ ಕಂಡು
ಅದರೆನೂ ಮಾಡೆನು ನಾನೆನನ್ನು ಇಂದು

ಬಡವರನು ತುಳಿದು ನಿಂತಿಹ ಓ ನಿರ್ಧಯಿ ಸರ್ಕಾರವೇ
ನಲುಗಿಹರು ಅವರು ನಿನ್ನ ಅಲುಗಿನ ಇರಿತಕ್ಕೆ
ಏರಿಸಿರುವೆ ಬೆಲೆಗಳನು ಎವೆರೆಸ್ಟ್ ಶಿಖರದಂತೆ
ಹತ್ತಲಾರರು ಬಡವರು ತೆನಸಿಂಗನಂತೆ

ಇದ ಕಂಡು ನಾನು ಸಿಡಿದು ನಿಂತರೆ
ಈ ಬಡಪಾಯಿಗೆ ಬೆಂಬಲ ಸಿಗುವುದೇ?
ಬಡವಿ ನೀನ್ ಮಾಡಗ್ದೊಂಗೆ ಇರು 

ಅಂತ ದೊಡ್ಡವರ ಮಾತು!!!!