Saturday, 23 March 2013

ಬರೆಯೋದು ಒಂದು ಕಲೆ


ಹಾಳೆ - ಒಂದು  :-
 ''ಏನಾದ್ರೂ ಬರೆ ಆದ್ರೆ ಚೆನ್ನಾಗಿ ಬರೆ  ; ಬರೆಯೋದು ಒಂದು ಕಲೆ ''  ಅಂತ ನಮ್ತಂದೆ ನಂಗೆ ಯಾವಾಗಲೂ  ಹೇಳ್ತಿದ್ದರು.  ನನ್ನ ಚೂರು ಪಾರು ಬರವಣಿಗೆಗೆ ನಮ್ತಂದೆ ನನ್ ಬಗ್ಗೆ ತೋರಿಸ್ತಿದ್ದ ಪ್ರೀತಿ, ಮುತುವರ್ಜಿ, ಕಾಳಜಿ, ಅವರು ಹುರಿದುಂಬಿಸುತ್ತಿದ್ದ  ಪರಿ ನಾನು ಬರೆಯುವಾಗಲ್ಲೆಲ್ಲ ಅವರು ನನ್ನೊಂದಿಗೆ ಇದ್ದಾರೆ ಎಂಬ ನನ್ನ ಒಳ ಮನಸ್ಸಿನ ಆ ಚಿಂತನೆಗೆ ನಾನು ಮೆಚ್ಚಲೇ ಬೆಕು.  ಯಾಕೆಂದರೆ ಈಗ ನನ್ನ ತಂದೆ ನಮ್ಮೊo ದಿಗಿಲ್ಲ  ಆದರೂ ಅವರ ಆ ನೆನಪು ನನ್ನ ಬರವಣಿಗೆಗೆ ಈಗಲೂ ತುಂಬಾ ಸಹಾಯಕವಾಗ್ತಾ ಇದೆ.  ನನ್ನನ್ನು ತಿದ್ದಿ ತೀಡಿ ಒಳ್ಳೆ ಸಂಸ್ಕಾರ , ಗುರು ಹಿರಿಯರಲ್ಲಿ ಗೌರವ , ಪ್ರಕೃತಿಯನ್ನು ಪ್ರೀತಿಸುವುದರ  ಜೊತೆ ಜೊತೆಗೆ ಪ್ರಾಣಿ-ಪಕ್ಷಿ ಸಂಕುಲ , ಅದಷ್ಟೇ ಯಾಕೆ ಈ ಇಡಿ ಪ್ರಪಂಚವನ್ನೇ ಪ್ರೀತಿಸುವುದನ್ನು ಹೇಳಿ ಕೊಟ್ಟ ನನ್ನ ಗುರುಗಳು ನಮ್ಮ ತಂದೆಯವರು.  ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ಅನ್ನಿಸುತ್ತೆ.  ಈ ಲೇಖನವನ್ನು ಬರೆಯಲು ಅವರ ನೆನಪುಗಳೇ ಕಾರಣ.  ನಾನು ಶಾಲೆ, ಕಾಲೇಜ್ ಮ್ಯಾಗಜಿನ್ ಗಳಿಗೆ ಸಣ್ಣ ಕತೆ, ಕವನ ಬರೆಯಲು ಮೂಲ ಕಾರಣ ನನ್ನ ಪ್ರೀತಿಯ ತಂದೆಯವರು .  ನನ್ನ ಪ್ರತಿ ಕತೆ, ಕವನ, ಅವರಿಗೆ ಮೊದಲು ತೋರಿಸಿ ಅವರಿಂದ ತಪ್ಪು - ಒಪ್ಪು ತಿದ್ದಿಸಿ, ಏನಾದ್ರು ಹೊಸ ಪದ ಪುಂಜಗಳು ಬೇಕಿದ್ದ ಪಕ್ಷದಲ್ಲಿ ಅಪ್ಪಾನೆ ನನ್ನ ನಿಘಂಟು; ಅವರಿಂದ ಕೆಲವೊಂದು ಪದಗಳನ್ನು ಸೇರಿಸಿ, ಅದನ್ನು ಮತ್ತೂ ಬೇಕೆಂದರೆ ಮುಂದುವರಿಸಿ ಅದಕ್ಕೆ ಏನಾದ್ರೂ ಮಾಹಿತಿ ಬೇಕಿದ್ರೆ ಲೈಬ್ರರಿಗೆ ಅಪ್ಪನ ಜೊತೆ ಹೋಗಿ ತುಂಬಾ ಕಾದಂಬರಿಗಳನ್ನು ಓಡುತ್ತಿದೆ; ಅಪ್ಪಾನೆ ಒಳ್ಳೊಳ್ಳೆ ಪುಸ್ತಕ  ಹುಡುಕಿ ಕೊಡುತ್ತಿದ್ದರು.   ನನಗೆ ಈಗಲೂ ನೆನಪಿದೆ, ತಂದೆಯವರು ಕೊಡುತ್ತಿದ್ದ ಪುಸ್ತಕ ತ್ರಿವೇಣಿ, ಆರ್ಯಾಂಭ ಪಟ್ಟಾಭಿ ಅವರಿಬ್ಬರೂ ಅಕ್ಕ-ತಂಗಿ ಎಂದು ಹೇಳಿ ಅವರ ಬುಕ್ಸ್ ಹುಡುಕಿ ಹುಡುಕಿ ಓದು ತ್ತಿದ್ದೆ.  ತ್ರಿವೇಣಿಯವರು ಬರೆದ ಮೊದಲ ಕಾದಂಬರಿ ನಾನು ಅತ್ಯಂತ ಆಸಕ್ತಿ ಇಂದ ಮತ್ತೆ ನಾನು ಓದಿದ ಮೊದಲ ಕಾದಂಬರಿ 'ಬೆಕ್ಕಿನ ಕಣ್ಣು' ತುಂಬಾ ಸೊಗಸಾಗಿ ಓದಿಸಿಕೊಂಡು ಹೋದ ಮೊದಲ ಕಾದಂಬರಿ.  ಮೊದಲ ಪುಟದಿಂದ ಕೊನೆಯವರೆಗೂ ತಲೆ ಎತ್ತದೆ ಸಂಪೂರ್ಣ  ಓದಿ ಮುಗಿಸಿದೆ.   ನನ್ನ ಬಾಲ್ಯದಲ್ಲಿ ನಾನ್ಯಾವತ್ತೂ ಮಾರ್ಕೆಟಿಗಾಗಲೀ ಶಾಪಿಂಗ್ ಗಾಗಲೀ  ಹೋಗುವುದು ವಾಡಿಕೆ ಇರಲಿಲ್ಲ ಶಾಲೆ, ಕಾಲೇಜ್, ತಪ್ಪಿದರೆ ಸಿಟಿ ಸೆಂಟ್ರಲ್ ಲೈಬ್ರರಿ .  ನನಗಿನ್ನೂ ಚೆನ್ನಾಗಿ ಜ್ಞಾಪಕ ಇದೆ ; ಶಾಲೆಗೆ ಬೇಸಿಗೆ ರಜ  ಬಂದರೆ ಸಾಕು, ಮನೆಗೆ ಕನ್ನಡ ಪ್ರಭ, ಸುಧಾ, ಪ್ರಜಾಮತ, ಚಂದಮಾಮ , ಗೊಂಬೆ ಮನೆ,  ಮಯೂರ, ತುಷಾರ, ಇನ್ನು ಮುಂತಾದ ದೈಹಿಕ, ಸಾಪ್ತಾಹಿಕ, ಮಾಸಿಕ, ಎಲ್ಲವೂ ಮನೆ ಬಾಗಿಲಿಗೆ ಬರುತ್ತಿದ್ದವು.  ಅಮ್ಮ, ಅಪ್ಪ, ಅಕ್ಕಂದಿರು, ಅಣ್ಣಂದಿರು, ಎಲ್ಲರು ಓದುವ ಗೀಳಿದ್ದವರೇ .  ಎಲ್ಲರೂ  ನಾ ಮುಂಚೆ, ತಾ ಮುಂಚೆ, ಎಂದು ಕಿತ್ತಾದುತ್ತಿದ್ದೆವು  ಮತ್ತು ಆ ಗಲಾಟೆಗೆ ನಮ್ಮಮ್ಮ ಬಂದು ಹೀಗೆ ಹೇಳುತ್ತಿದ್ದರು ' ಅಯ್ಯೋ ಮಕ್ಕಳಾ ಯಾಕ್ಹೀಗೆ ಕಿತ್ತಾಡು ತೀರಾ ? ಮನೇಲೆ ಇರುತ್ತಲ್ಲ ನಿಧಾನ ವಾಗಿ ಓದಿ' ಎಂದರೂ ನಾವುಗಳು ಕಿವಿ ಮೇಲೆ ಹಾಕಿ ಕೊಳ್ಳುತ್ತಿರಲಿಲ್ಲ , ಎಲ್ಲ ಓದಿ ಮುಗಿಸಿ ಮತ್ತೆ ಮನೆ ಸಮೀಪ  ಲೈಬ್ರರಿ ಗೆ ಹೋಗಿ ತುಂಬಾ ಬುಕ್ಸ್ ಓ ದುತ್ತಿದ್ದೆವು.   ನಾನು ಮೊದಲು ಓದಿದ ಒಂದು ಸಣ್ಣ ಕಥೆ 'ರಾ ಜು ಮತ್ತು ಹುರುಳಿ ಬೀಜ' ಅದೆಂತಹ ಕಲ್ಪನೆ ಎಂದರೆ ನನ್ನ ಮನಸ್ಸಿನಲ್ಲಿ ಅಚ್ಚು ಒತ್ತಿದ ಮೊದಲ ಕಥೆ.   ಇದೆಲ್ಲದರ ಪ್ರೇರೇಪಣೆ  ನನಗೆ ಬರೆಯುವ ಹವ್ಯಾಸ ಮೂಡಿ  ಬರಲು ಕಾರಣ ವಾಯಿತು. ಇನ್ನು ಬರೆಯುತ್ತ ಹೋದರೆ ನನ್ನ ಬಾಲ್ಯ , ನನ್ನ ಶಾಲಾ  ದಿನಗಳು, ಎಲ್ಲ ನನ್ನ ಮನಸ್ಸಿನ ತೆರೆ ಮೇಲೆ ಮೂಡಿ ಬರುತ್ತೆ.  ಅದನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಿ.  ಸಮಯ ದೊರೆತಾಗ ಮತ್ತೊಂದಿಷ್ಟು ಬರೆಯುವ ಚಪಲ.  ಅಯ್ಯೋ ಇನ್ನು ಅಡಿಗೆ ಮನೆಯಲ್ಲಿ ತುಂಬಾ ಕೆಲಸ ಬಾಕಿ ಇದೆ :೦  ಮತ್ತೆ ಮುಂದುವರಿಸುತ್ತೇನೆ. 

ಉಮಾ ಪ್ರಕಾಶ್ 


Wednesday, 5 December 2012



ಕಾಡಿಗೆ ಕಣ್ಣಿನ ಬೊಗಸೆ ಕಂಗಳ ಸುಂದರಿ
ನಿನ್ನ ನಯನಗಳು ಅದೆಷ್ಟು ಸುಂದರವಾಗಿದೆ !
ಮೋಡದಂತೆ ಹರಡಿರುವ ಕೂದಲ ರಾಶಿ
ನಿನ್ನ ಸುಂದರ ಮೊಗಕ್ಕೆ ಇನ್ನಷ್ಟು ಶೋಭೆ !! ವಾಹ್
ಓ ಚೆಲುವೆ ನಿನ್ನ ನೋಡಿದ ಕೂಡಲೇ ಮಾತು
ಬಾರದವನು ಕೂಡ ಕವಿತೆ ಹೆಣೆಯುತ್ತಾನೆ .....




ಹಣೆ ಬರಹ ಬರೆದ ಆ ಭಗವಂತ ; ದಯಾಮಯ ಭಗವಂತ
ಮೇಲೆ ಕುಳಿತು ನಮ್ಮನ್ನೆಲ್ಲ ನೋಡಿ ನಗುತ ಕುಳಿತ
ಬಡವ - ಶ್ರೀಮಂತ ಎಂದು ಭೇದ ಭಾವ ಮಾಡಿದ್ದೆ ನೀವು
ಇದಕ್ಕೆ ಹೊಣೆಗಾರ ನಾನಲ್ಲ ಎಂದು ವ್ಯಂಗ್ಯವಾಗಿ ನಕ್ಕ !!!!

ಬತ್ತಿ ಹೋದ ಕಣ್ಣುಗಳಲ್ಲಿ ಕಣ್ಣೀರಿಲ್ಲ ;
ಕಣ್ಣೀರಿಗೆ ಬರ ಆದರೆ ಆಸೆ ತುಂಬಿದೆ ಆ ಕಣ್ಣುಗಳಲ್ಲಿ ....
ಅಯ್ಯೋ ವಿಧಿಯೇ ಏನಿದು ನಿನ್ನ ಅಟ್ಟಹಾಸ ??

Tuesday, 22 May 2012


ಹಿಂದಿನ ಭಾವನೆ


ಪ್ರಾರ್ಥಿಸುವ ಮನಸಿನ ಜೊತೆ ಕೋರಿಕೆ ಇರುತ್ತೆ
ಕೋರಿಕೆ ಜೊತೆ ಜೊತೆಗೆ ಧೈನ್ಯತ ಭಾವ ಇರುತ್ತೆ

ಓದುವ ಮನಸುಗಳ ಹಿಂದೆ ಜ್ಞಾನದ ದಾಹ ಇರುತ್ತೆ
ಬರೆಯುವ ಕೈಗಳ ಹಿಂದೆ ಬರೆಯುವ ಹಂಬಲ ಇರುತ್ತೆ

ಪ್ರೀತಿ ಮಾಡುವ ಕಣ್ಣುಗಳ ಹಿಂದೆ ವಾತ್ಸಲ್ಯ ಇರುತ್ತೆ
ಕರುಣೆ ತೋರುವ ಕಣ್ಣುಗಳ ಹಿಂದೆ ಕಾಳಜಿ ಇರುತ್ತೆ

ನಗುವ ಕಣ್ಣುಗಳ ಹಿಂದೆ ಕಣ್ಣೀರು ಇರುತ್ತೆ
ಕೋಪಿಸುವ ಕಣ್ಣುಗಳ ಹಿಂದೆ ಪ್ರೀತಿ ಇರುತ್ತೆ

ಗೆಲುವಿನ ಕಣ್ಣುಗಳ ಹಿಂದೆ ಪರಿಶ್ರಮ ಇರುತ್ತೆ
ರಕ್ಷಣೆ ಮಾಡುವ ಕಣ್ಣುಗಳ ಹಿಂದೆ ಭಯ ಇರುತ್ತೆ

ಹೃದಯದ ಬಡಿತದ ಹಿಂದೆ ಭೀತಿ ಇರುತ್ತೆ
ಹೃದಯದ ಬಡಿತ ನಿಂತರೆ ಉಸಿರು ಹೋಗುತ್ತೆ !

ಶಾಯರಿ - 1

ಭಾವ ಜೀವಿಯಾದ ನನಗೆ ಮರೆವಿನ ಖಾಯಿಲೆ
ಭಾವ ಜೀವಿಯಾದ ನನಗೆ ಮರೆವಿನ ಖಾಯಿಲೆ ......... 

ಸಾಲದ್ದಕ್ಕೆ ಮೇಲಿಂದ ಮೇಲೆ ಕವನಗಳ ಗೀಚೋ ಕಲೆ
ಸಾಲದ್ದಕ್ಕೆ ಮೇಲಿಂದ ಮೇಲೆ ಕವನಗಳ ಗೀಚೋ ಕಲೆ .............

ಡೈರಿಯಲ್ಲಿ ಬರೆಯುವ ಮುನ್ನ ಮನದಾಳದಲ್ಲಿ ಗೀಚಲೇ
ಡೈರಿಯಲ್ಲಿ ಬರೆಯುವ ಮುನ್ನ ಮನದಾಳದಲ್ಲಿ ಗೀಚಲೇ ..........

ಮನದಾಳದಲ್ಲಿ ಗೀಚಿಟ್ಟ ತುಣುಕನ್ನು ಮರೆತೇ ಬಿಡಲೇ
ಮನದಾಳದಲ್ಲಿ ಗೀಚಿಟ್ಟ ತುಣುಕನ್ನು ಮರೆತೇ ಬಿಡಲೇ .........

ಈ 'ಮರೆವು' ಹೆಬ್ಬಾವಿನಂತೆ ತನ್ನ ಕೆನ್ನಾಲಿಗೆ ಚಾಚಿದೊಡೆ
ಈ 'ಮರೆವು' ಹೆಬ್ಬಾವಿನಂತೆ ತನ್ನ ಕೆನ್ನಾಲಿಗೆ ಚಾಚಿದೊಡೆ........

ನನ್ನೆಲ್ಲ ಭಾವನೆಗಳು ಮುದುರಿ ಮಡಿಸಿಟ್ಟ ಕೊಡೆ ಕೊಡೆ ಕೊಡೆ
ನನ್ನೆಲ್ಲ ಭಾವನೆಗಳು ಮುದುರಿ ಮಡಿಸಿಟ್ಟ ಕೊಡೆ ಕೊಡೆ ಕೊಡೆ ............



ಶಾಯರಿ -2


ಬರೆದೂ ಬರೆದೂ ಕನ್ನಡ ಕವನವನ್ನ
      ಬರೆದೂ ಬರೆದೂ ಕನ್ನಡ ಕವನವನ್ನ ......

ಬಳುವಳಿಯಾಗಿ ಪಡೆದೆ ಕನ್ನಡಕವನ್ನ
       ಬಳುವಳಿಯಾಗಿ ಪಡೆದೆ ಕನ್ನಡಕವನ್ನ ......

ಆದರೆ ಮಹಾತ್ಮಾ ಗಾಂಧಿ ಹಾಕಲಿಲ್ಲವೇ ಕನ್ನಡಕವನ್ನ ?
       ಆದರೆ ಮಹಾತ್ಮಾ ಗಾಂಧಿ ಹಾಕಲಿಲ್ಲವೇ ಕನ್ನಡಕವನ್ನ ?.......

ನಾನೂ ಮಹಾತ್ಮರ ಹಾದಿಯಲ್ಲಿ ಸಾಗುವೆ ಇನ್ನು ಮುನ್ನ
         ನಾನೂ ಮಹಾತ್ಮರ ಹಾದಿಯಲ್ಲಿ ಸಾಗುವೆ ಇನ್ನು ಮುನ್ನ..........


ತಬ್ಬಲಿಯ ಕೂಗು

ಅಮ್ಮ ನನ್ನ ಹೆತ್ತಮ್ಮ ನೀನು
ಸಾಕಿ ಬೆಳೆಸಿದ ದೇವತೆ ನೀನು
ನಾನು ಅಂಬೆ ಗಾಲಿಟ್ಟು ನಡೆದಾಗ ಅದೆಷ್ಟು ಆನಂದ ಪಟ್ಟೆಯಮ್ಮ
ನಾನು ನಕ್ಕಾಗ ನಗುವೇ ; ಅತ್ತಾಗ ಅಳುವೇಯಲ್ಲಮ್ಮ ನೀನು ...........
ನಾ ಮೊದಲ ಬಾರಿ 'ಅಮ್ಮ' ಎಂದಾಗ ನಿನ್ನ ಕಣ್ಣು ಮಿಂಚುತ್ತಿತ್ತು
ಆ ಮಿಂಚಿನ ಬೆಳಕಲ್ಲಿ ನನ್ನ 'ನಗು' ಪ್ರಕಾಶಿಸುತಿತ್ತು !!
ನಾನು ತೊದಲ್ನುಡಿ ಕಲಿತಾಗ ನನಗೆ ಅಮ್ಮ, ಅಪ್ಪ, ಅಜ್ಜ, ಅಜ್ಜಿ
ಎಂದು ಪದಗಳ ಪರಿಚಯ ಮಾಡಿಸಿದ ಗುರುವಮ್ಮ ನೀನು
ನನ್ನ ಬಾಲ್ಯದಾಟ ಗಳನ್ನು ನೋಡಿ ಅದೆಷ್ಟು ಖುಷಿ ಪಟ್ಟೆಯಮ್ಮ
ನನ್ನ ಬೆಳವಣಿಗೆ ಕಂಡು ಹಿರಿ ಹಿರಿ ಹಿಗ್ಗುತ್ತಿದೆಯಲ್ಲಮ್ಮ !!
ಆದರೀಗ ನೀನು ಆ ದೇವರ ನಾಡಿಗೆ ಹೋಗಿ
ನನ್ನನ್ನು ತಬ್ಬಲಿ ಮಾಡಿ ಬಿಟ್ತೆಯಲ್ಲಮ್ಮ
'ತಬ್ಬಲಿಯು ನೀನಾದೆ ಮಗನೆ' ಎಂದು ನೀ ಕಣ್ಣಿರಿಟಾಗ
ಈ ಭೂಮಿ ಬಾಯಿ ಬಿಡ ಬಾರದೆ ಎಂದು ರೋದಿಸಿದೆ
ನನ್ನ ರೋದನೆ ಕೇಳುವವ ರಾರಮ್ಮ ???