Tuesday 22 October 2013

ಸಾರ್ಥಕತೆ








ಬಡತನದ ಬೇಗೆಯಲ್ಲಿ
ನೊಂದು ಬೆಂದು
ಬಳಲಿ ಬೆಂಡಾಗಿ
ಮದುವೆ ಆದ ಮೇಲೆ ಅತ್ತೆ-ಮಾವ,
ಗಂಡ, ಮಕ್ಕಳ ಸೇವೆ ಮಾಡಿ ಕೊಂಡು
ತನ್ನ ವೈಯುಕ್ತಿಕ ಯಾವುದೇ ಚಿಕ್ಕ ಪುಟ್ಟ
ಆಸೆಗಳನ್ನೂ  ಸಹಾ ಪೂರೈಸಿ ಕೊಳ್ಳಲಾಗದೆ
ಇಡಿ ಜೀವನವನ್ನು ಬಡತನದಲ್ಲಿ ಕಳೆದು
ಜೀವನದಲಿ ಜಿಗುಪ್ಸೆ ಹೊಂದಿ 
ಜೀವನ ದುಸ್ಸರ ಎನಿಸಿ
ಆತ್ಮ ಹತ್ಯೆ ಮಹಾ ಪಾಪ ಎಂದು ತಿಳಿದಿದ್ದರೂ
'ಆತ್ಮವನ್ನು ಹತ್ಯೆ' ಮಾಡಿಕೊಂಡೆ !!!!
ನೆರೆ-ಹೊರೆ, ಬಂಧು-ಬಳಗ ನೆಂಟರಿಷ್ಟರೆಲ್ಲಾ ಸೇರಿ
ನನ್ನ ಕೊನೆ ದರ್ಶನಕ್ಕಾಗಿ ಬಂದವರು ಹೇಳುತ್ತಿದ್ದದ್ದು ಹೀಗೆ
''ಆಹಾ ! ಈ ಮಹಾ ತಾಯಿ ಮುತ್ತೈದೆ ಸಾವೇ ಬೇಕೆಂದು
ಬಯಸಿ ಬಯಸಿ ಹೀಗೆ ಆತ್ಮ ಹತ್ಯೆಗೆ ಶರಣಾಗಿದ್ದಾಳೆ ''
ಮಹಾ ಪುಣ್ಯವಂತೆ ಎಂದೆಲ್ಲ ಹೊಗಳಿ ಹಾಡುತ್ತಿದ್ದುದು ಕೇಳಿ
''ಆತ್ಮಹತ್ಯೆ'' ಮಾಡಿ ಕೊಂಡದ್ದು ಸಾರ್ಥಕ ಆಯಿತು ಎನಿಸಿತು !!!