Friday 23 September 2011

ಬೀಳ್ಕೊಡುಗೆ



ಹೋಗುವವರೇ ಮರೆಯದಿರಿ ನಮ್ಮನೆಂದೆಂದು, 
ತಿಳಿಯದಿರಿ ನಿಮ್ಮ ಋಣ ತೀರಿತೆಂದೂ 
ಗುರು-ಶಿಷ್ಯರ ಸಂಭಂದವು ಎಂದು ಎಂದೆಂದೂ, 
ಬಿಡಿಸಿಲಾರದಂಥ ಗಂಟು ಎಂದು ಎಂದೆಂದೂ : :

ಬೆಳೆಯುವ ಪೈರು ಮೊಳಕೆಯಲಿ ಎಂಬಂತೆ 
ನೀವೆಲ್ಲ ಮುಂದಿನ ಸತ್ಪ್ರಜೆಯಂತೆ ;
ಶ್ರದ್ದೆಯಿಂದ ಶ್ರಮವಹಿಸಿ ವಿದ್ಯೆ ಗಳಿಸಿರಿ 
ಮುಂದಿನ ಭವಿಷ್ಯಕೆ ಬುನಾದಿ ಹಾಕಿರಿ : :

ಹೋಗುವವರೇ ಮರೆಯದಿರಿ ನಮ್ಮನೆಂದೆಂದು, 
ತಿಳಿಯದಿರಿ ನಿಮ್ಮ ಋಣ ತೀರಿತೆಂದೂ 
ಗುರು-ಶಿಷ್ಯರ ಸಂಭಂದವು ಎಂದು ಎಂದೆಂದೂ, 
ಬಿಡಿಸಿಲಾರದಂಥ ಗಂಟು ಎಂದು ಎಂದೆಂದೂ : :

( ನನ್ನ ನೆಚ್ಚಿನ ೧೦ನೆ ತರಗತಿ ವಿಧ್ಯಾರ್ಥಿ ಗಳಿಗಾಗಿ ನಾನು ರಚಿಸಿ ಹಾಡಿದ್ದು )








 











ದಯಾಮಯ ಭಗವಂತ




ನಾನು ದೇವರನ್ನು  ಭಕ್ತಿ ಇಂದ ಪೂಜಿಸಲು ಪುಷ್ಪವನ್ನು ಬೇಡಿದೆ;
ಅವನೋ ದಯಾಮಯ ದೊಡ್ಡ ಉದ್ಯಾನವನವನ್ನೇ ಕರುಣಿಸಿದ

ನಾನು ಅವನಿಗೆ ಹಣ್ಣುಗಳಿಂದ ನೈವೇದ್ಯ ಮಾಡಲು ಒಂದು ಹಣ್ಣಿನ ಮರವನ್ನು ಬೇಡಿದೆ ;
ಅವನೋ ದಯಾಮಯ ದೊಡ್ಡ ಹಣ್ಣಿನ ತೋಟವನ್ನೇ ದಯಪಾಲಿಸಿದ;

ನಾನು ದೇವರನ್ನು ನನ್ನ ದಾಹ ಇಂಗಿಸಲು ಕುಡಿಯಲು ನೀರು ಬೇಡಿದೆ  ;
ಅವನೋ ದಯಾಮಯ ದೊಡ್ಡ ಸಾಗರವನ್ನೇ ಸೃಷ್ಟಿಸಿದ ;

ನಾನು ದೇವರನ್ನು ನನ್ನ ಹಸಿವು ತಣಿಸಲು ಆಹಾರ  ಬೇಡಿದೆ  ;
ಅವನೋ ದಯಾಮಯ ಪಂಚ ಭಕ್ಷ ಪರಮಾನ್ನ ವನ್ನೇ ನೀಡಿದ

ನಾನು ದೇವರನ್ನು ನನಗೆ ' ತಾಯ್ತನ ' ದಯಾ ಪಾಲಿಸು ಎಂದು ಬೇಡಿದೆ
ಅವನೋ ದಯಾಮಯ ಒಟ್ಟಿಗೆ 'ಅವಳಿ-ಜವಳಿ' ಗಂಡು ಮಕ್ಕಳನ್ನು ಕರುಣಿಸಿ ಹರಸಿದ

ನಾನು ಅವನನ್ನು ಭಕ್ತಿ ಇಂದ ಹಾಡಿ ಹೊಗಳಲು ಒಂದು 'ಭಕ್ತಿ ಗೀತೆ' ಹಾಡಿದೆ
ಅವನೋ ದಯಾಮಯ ನನ್ನನ್ನ ಒಬ್ಬಳು ಒಬ್ಬಳು ಅಪ್ರತಿಮ ಗಾಯಕಿಯನ್ನಾಗಿ ಮಾಡಿದ

ನಾನು ಅವನ್ನನ್ನು ಶ್ರೀ ಹರಿ, ನಾರಾಯಣ , ಪಾಂಡು ರಂಗ,  ರಾಮ, ಕೃಷ್ಣ, ಮುಕುಂದ, ಗೋವಿಂದ
ಎಂದು ಭಜಿಸಲು ಅವನು ನಮಗೆ  ಅರೋಗ್ಯ, ಸಕಲ ಸಂಪತ್ತುಗಳನ್ನೂ ಕರುಣಿಸಿದ
ಅವನೋ ದಯಾಮಯ ಭಗವಂತ ...