Thursday 31 October 2013

ಜೈ ಕನ್ನಡಾಂಬೆ ; ಜೈ ಕರುನಾಡು, ಜೈ ಹೊ ಕನ್ನಡ




ಮಕ್ಕಳಿಗೆ ಕನ್ನಡ ಅಭಿಮಾನ - ಬೆಳೆಯುವ ಪೈರು ಮೊಳಕೆಯಲ್ಲಿ ಅಂದಂತೆ
ಅವರ ತೊದಲು ಮಾತು ಕಲಿತ  ಕೂಡಲೇ 'ಅಮ್ಮ' ಎನ್ನಲು ಕಲಿಯುತ್ತಾರೆ
ಹಾಗೆ ಅಪ್ಪ, ಅಜ್ಜಿ, ಅಜ್ಜ, ಮಾಮ, ಅತ್ತೆ, ಅಣ್ಣ, ಅಕ್ಕ, ಚಿಕ್ಕಮ್ಮ, ಚಿ ಕ್ಕಪ್ಪ;
ಹೀಗೆ ಕರೆಯಲು ಹೇಳಿ ಕೊಡಬೇಕು ಅಲ್ಲವೇ ??
ಅದು ಬಿಟ್ಟು ಮಮ್ಮಿ, ಡ್ಯಾಡಿ, ಅಂಕಲ್ , ಆಂಟ್, ಎಂದೆಲ್ಲ ಕರೆದರೆ
ಅಮ್ಮ, ಅಪ್ಪ, ದೊಡ್ಡಪ್ಪ, ದೊಡ್ಡಮ್ಮ, ಎಂದು ಬಾಯಿ ತುಂಬ
ಪ್ರೀತಿ ತುಂಬಿ ಕರೆದ ಹಾಗಾಗುವುದಿಲ್ಲ !!!
ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಮತ್ತೆ ಅಕ್ಕ-ಪಕ್ಕದ ಮನೆಯವರಿಗೂ ಆಂಟಿ
ಚಿಕ್ಕಪ್ಪ, ದೊಡ್ಡಪ್ಪ, ಮಾವ ಮತ್ತೆ ಅಕ್ಕ-ಪಕ್ಕದ ಮನೆಯವರಿಗೂ ಅಂಕಲ್
ಇದ್ಯಾವ ಸೀಮೆ  ''ಅಂಕಲ್ -ಆಂಟ್' ನಾ ಬೇರೆ ಕಾಣೆ !!
ಕನ್ನಡ ಉಳಿಸಿ, ಬೆಳೆಸಿ, ಹಾಗೆ ಮನೆಯವರೆಲ್ಲ ಕನ್ನಡದಲ್ಲೇ ಸಂಭಾಷಿಸಿ 


ಕರ್ನಾಟಕ ದಲ್ಲಿ ಇರುವ ಪ್ರತಿಯೊಬ್ಬ ಕನ್ನಡಿಗರ ಮನೆ ಆಗಬೇಕು 
''ಕನ್ನಡಮ್ಮನ ದೇವಾಲಯ''
ಆಗ ಆಗುವುದು ನಮ್ಮೆಲ್ಲರ 'ಮನೆಯೇ ಮಂತ್ರಾಲಯ' ;
ಜೈ ಭುವನೇಶ್ವರಿ, ಜೈ ಕರ್ನಾಟಕ, ಜೈಕನ್ನಡಾಂಬೆ 


Monday 28 October 2013






ಸವಿ ಸವಿ ನೆನಪು

ಅದೇ ಸೂರ್ಯ , ಅದೇ ಚಂದ್ರ, ಅದೇ ನಕ್ಷತ್ರ , ಅದೇ ಬಾನು
ಆದರೂ ಪ್ರತಿ ದಿನವನ್ನು ಹೊಸದಾಗಿ ನೋಡಿ;
ಅದೇ ಹಸಿರು, ಅದೇ ಉಸಿರು, ಅದೇ ಪ್ರಕೃತಿ, ಅದೇ ಪ್ರಪಂಚ
ಆದರೂ ಪ್ರತಿ ಕ್ಷಣವನ್ನು ಹೊಸದಾಗಿ ಆಸ್ವಾದಿಸಿ
ಅದೇ ಪಕ್ಷಿ ಸಂಕುಲ, ಅದೇ ತಂಗಾಳಿ, ಅದೇ ಉರಿ ಬಿಸಿಲು
ಆದರೂ ಪ್ರತಿ ಕ್ಷಣವನ್ನು ಹೊಸದಾಗಿಸಿ ಕೊಳ್ಳಿ ;
ಯಾಕೆಂದ್ರೆ ಮನುಷ್ಯ ಎಷ್ಟೇ ಹಣ ಸಂಪಾದಿಸಿದ್ರು
ಭೂಮಿಯ ಮೇಲೆ ನಮ್ಮೆಲ್ಲರ ಋಣ ಕಳೆದ್ರೆ
ಕೊನೆಗೆ ಉಳಿಯುವುದು ನಮ್ಮ-ನಿಮ್ಮ ನೆನಪು ಮಾತ್ರ
ಅದಕ್ಕೆ ನೆನಪುಗಳು ಯಾವಾಗ್ಲೂ
ಸವಿ-ಸವಿ ನೆನಪಾಗಿದ್ರೆ ಚೆಂದ !!

Friday 25 October 2013



ನಾನು ಇಷ್ಟ ಪಡುವುದು :

ಪ್ರೀತಿ, ಪ್ರೇಮ,
ಮಮತೆ, ವಾತ್ಸಲ್ಯ,
ಸ್ನೇಹ, ಸಹನೆ,

ಹಿರಿಯರಲ್ಲಿ , ಭಯ, ಭಕ್ತಿ,
ಗೌರವ, ನಯ, ವಿನಯ,
ಮಾಧುರ್ಯತೆ ; ಸಂಕೋಚ,
ಪ್ರೀತಿ ತುಂಬಿದ ಕಣ್ಣುಗಳು
ಭಾವ ತುಂಬಿದ ಕಣ್ಣಾಲಿಗಳು
ಇಡಿ ಜಗತ್ತನ್ನೇ
ಪ್ರೀತಿಸುವ ಹೃದಯ
ಸುಂದರ ಪ್ರಪಂಚ !!!

ನಾನು ಇಷ್ಟ ಪಡದಿರುವುದು  


ಬಿಂಕ-ಬಿನ್ನಾಣ
ದ್ವೇಷ-ಕ್ರೌರ್ಯ
ಮದ-ಮತ್ಸರ,
ಸಿಟ್ಟು-ಸೆಡವು,
ಕೋಪ-ತಾಪ,

ಕೊಲೆ-ಸುಲಿಗೆ
ತಿರಸ್ಕಾರ
ತಾತ್ಸಾರ 
ಕ್ರೋದ
ಹೊಟ್ಟೆಕಿಚ್ಚು
ಹೊಟ್ಟೆ ಉರಿ
ಸುಡುಗಾಡು ಪ್ರರಂಚ ......





Tuesday 22 October 2013

ಸಾರ್ಥಕತೆ








ಬಡತನದ ಬೇಗೆಯಲ್ಲಿ
ನೊಂದು ಬೆಂದು
ಬಳಲಿ ಬೆಂಡಾಗಿ
ಮದುವೆ ಆದ ಮೇಲೆ ಅತ್ತೆ-ಮಾವ,
ಗಂಡ, ಮಕ್ಕಳ ಸೇವೆ ಮಾಡಿ ಕೊಂಡು
ತನ್ನ ವೈಯುಕ್ತಿಕ ಯಾವುದೇ ಚಿಕ್ಕ ಪುಟ್ಟ
ಆಸೆಗಳನ್ನೂ  ಸಹಾ ಪೂರೈಸಿ ಕೊಳ್ಳಲಾಗದೆ
ಇಡಿ ಜೀವನವನ್ನು ಬಡತನದಲ್ಲಿ ಕಳೆದು
ಜೀವನದಲಿ ಜಿಗುಪ್ಸೆ ಹೊಂದಿ 
ಜೀವನ ದುಸ್ಸರ ಎನಿಸಿ
ಆತ್ಮ ಹತ್ಯೆ ಮಹಾ ಪಾಪ ಎಂದು ತಿಳಿದಿದ್ದರೂ
'ಆತ್ಮವನ್ನು ಹತ್ಯೆ' ಮಾಡಿಕೊಂಡೆ !!!!
ನೆರೆ-ಹೊರೆ, ಬಂಧು-ಬಳಗ ನೆಂಟರಿಷ್ಟರೆಲ್ಲಾ ಸೇರಿ
ನನ್ನ ಕೊನೆ ದರ್ಶನಕ್ಕಾಗಿ ಬಂದವರು ಹೇಳುತ್ತಿದ್ದದ್ದು ಹೀಗೆ
''ಆಹಾ ! ಈ ಮಹಾ ತಾಯಿ ಮುತ್ತೈದೆ ಸಾವೇ ಬೇಕೆಂದು
ಬಯಸಿ ಬಯಸಿ ಹೀಗೆ ಆತ್ಮ ಹತ್ಯೆಗೆ ಶರಣಾಗಿದ್ದಾಳೆ ''
ಮಹಾ ಪುಣ್ಯವಂತೆ ಎಂದೆಲ್ಲ ಹೊಗಳಿ ಹಾಡುತ್ತಿದ್ದುದು ಕೇಳಿ
''ಆತ್ಮಹತ್ಯೆ'' ಮಾಡಿ ಕೊಂಡದ್ದು ಸಾರ್ಥಕ ಆಯಿತು ಎನಿಸಿತು !!!