Wednesday 27 July 2011

ಪ್ರೀತಿ




ಎಲ್ಲರನ್ನು ಪ್ರೀತಿ ಇಂದ ಕಾಣಿರಿ
ಎಲ್ಲರೂ ನಿಮ್ಮನ್ನು ಪ್ರೀತಿಸುವರು
ಖಗ-ಮೃಗ, ಪ್ರಾಣಿ-ಪಕ್ಷಿ ಗಳನ್ನೂ ಪ್ರೀತಿಸಿ
ಎಲ್ಲರ ಮೆಚ್ಚಿಗೆ ಪ್ರೀತಿಯೇ
ನಿಮ್ಮ ಜೀವನದ ಹಾದಿಗೆ ಬೆಳಕು :
ನಿಮ್ಮ ನಗು ಮುಖವೇ ನಿಮಗೆ ಶ್ರೀ ರಕ್ಷೆ
ನಿಮ್ಮ ಸೊರಗಿದ ಗಂಟು ಹಾಕಿದ ಮುಖವೇ
ನಿಮ್ಮ ನಾಶದ ನಿರೀಕ್ಷೆ !
ಕಷ್ಟವೇನೆ ಇರಲಿ ಬಾಳಿ ಮರೆತು
ಸಾಧಿಸಲು ಯತ್ನಿಸಿ ಏನಾದರು ಮತ್ತೂ :
ಕೊರಗಿ ಮರುಗದಿರಿ
ಮರುಗಿ ಸೊರಗದಿರಿ

ಸೊರಗಿ ಕೃಶವಾಗದಿರಿ
ಎಲ್ಲರನ್ನು ಪ್ರೀತಿ ಇಂದ ಕಾಣಿರಿ

ಕಲಿಗಾಲ




ಪ್ರಪಂಚವೆಂಬ ಸಂತೆಯಲ್ಲಿ
ಲಂಚಕೋರರ ಕಳ್ಳ ಸಂತೆಯಲ್ಲಿ
ಗೋಮುಖ ವ್ಯಾಘ್ರರಂತಿಲ್ಲಿ
ಮುಖವಾಡವ ಧರಿಸಿದರಿಲ್ಲಿ
ಬಾಳುವಿರಿ ಹಾಯಾಗಿ ನೀವಿಲ್ಲಿ :
ನ್ಯಾಯಕ್ಕೆ ಕಾಲವಲ್ಲವಿ ಕಲಿಗಾಲವು
ಅನ್ಯಾಯಕಿಹ ಬೆಲೆ ನ್ಯಾಯಕ್ಕಿಲ್ಲವು;
ಸತ್ಯ ಧರ್ಮ ನ್ಯಾಯಗಳೆಲ್ಲ
ಗೋಮುಖ ವ್ಯಾಘ್ರರ ಕಾಲ ಮೆಟ್ಟುಗಲಾಗಿಹವು 
ಅಂದು ಪುಣ್ಯಕೋಟಿ ನುಡಿಯಿತು
ಸತ್ಯವೇ ನಮ್ಮ ತಾಯಿ -ತಂದೆ
ಬಂಧು-ಬಳಗ ಸಕಲವೂ ಎಂದು
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಪರಮಾತ್ಮ ಮೆಚ್ಚನೆಂದು
ಪುಣ್ಯಕೋಟಿಯ ಮಾತು ಕೇಳಿ
ಅದರ ಸತ್ಯ ಸಂಧತೆಗೆ ಮೆಚ್ಚಿ
ಹುಲಿಯೇ ಪ್ರಾಣಾರ್ಪಣೆ ಮಾಡಿಕೊಂಡಿತು
ಆದರಿಂದು ಪುಣ್ಯ ಕೋಟಿಯಂಥ 
ಸತ್ಯ ಸಂಧರಿಗೆ ಸಿಗುತಿರುವ ಬೆಲೆ ?

ಬಡಪಾಯಿ

ಬಡಪಾಯಿ ನಾನು ಏನ ಮಾಡಲಿ ?




 ಸಿಡಿದು ನಿಂತಿಹೆ ನಾನು
ಸರ್ಕಾರದ ಕಾನೂನಿನ ರೀತಿಯ ಕಂಡು
ಅದರೆನೂ ಮಾಡೆನು ನಾನೆನನ್ನು ಇಂದು

ಬಡವರನು ತುಳಿದು ನಿಂತಿಹ ಓ ನಿರ್ಧಯಿ ಸರ್ಕಾರವೇ
ನಲುಗಿಹರು ಅವರು ನಿನ್ನ ಅಲುಗಿನ ಇರಿತಕ್ಕೆ
ಏರಿಸಿರುವೆ ಬೆಲೆಗಳನು ಎವೆರೆಸ್ಟ್ ಶಿಖರದಂತೆ
ಹತ್ತಲಾರರು ಬಡವರು ತೆನಸಿಂಗನಂತೆ

ಇದ ಕಂಡು ನಾನು ಸಿಡಿದು ನಿಂತರೆ
ಈ ಬಡಪಾಯಿಗೆ ಬೆಂಬಲ ಸಿಗುವುದೇ?
ಬಡವಿ ನೀನ್ ಮಾಡಗ್ದೊಂಗೆ ಇರು 

ಅಂತ ದೊಡ್ಡವರ ಮಾತು!!!!

ಕಲ್ಪನಾಲಹರಿ



ನಾನೊಂದು ಎಣಿಸಿದರೆ ದೈವದೆಣಿಕೆ ಬೇರೆಯೇ ಆಗಿತ್ತು!
ನನ್ನೆಣಿಕೆ ಹೀಗಿತ್ತು!
ನಾನೂ ನಾಟ್ಯ ರಾಣಿ ಶಾಂತಲೆ ಯಂತಾಗಬೇಕು
...ಗೆಜ್ಜೆ ಕಟ್ಟಿ ಕೊಂಡು ನವಿಲಿನಂತೆ ನರ್ತಿಸಿ
ಪ್ರೇಕ್ಷಕರಿಂದ ಬಿರುದು ಬಾವಲಿಗಳನ್ನು ಪಡೆದು
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !
ನಾನೂ ಶ್ರೇಷ್ಠ ಲೇಖಕಿ ತ್ರಿವೇಣಿ ಯವರಂತೆ ಆಗಬೇಕು
ಕಥೆ ಕಾದಂಬರಿ ಗಳನ್ನೂ ರಚಿಸಿ
ಓದುಗರನ್ನು ನನ್ನ ಕಲ್ಪನೆಯ ಕಡಲಲ್ಲಿ ಮುಳುಗಿಸಿ
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !
ನಾನೂ ಗಾಯನ ವಿಧೂಷಿ ಎಂ ಎಸ್ ಸುಬ್ಬಲಕ್ಷ್ಮಿ ಯವರಂತೆ ಆಗಬೇಕು
ನನ್ನ ಇನಿದಾದ ಕಂಠ ದಿಂದ ಹಾಡಿ
ಕೇಳುಗರನ್ನು ನನ್ನ ಸಂಗೀತದ ಸರೋವರದಲ್ಲಿ ತೇಲಿಸಿ
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !
 

ಭೂದೇವಿಗೆ ನನ್ನ ನಮನ

'ಭೂದೇವಿ ನೀನು ಕ್ಷಮಯಾಧರಿತ್ರಿ '



ಕೋಟಿ ಕೋಟಿ ಜೀವಿಗಳ ಹೊತ್ತು ನಿಂತಿಹ ಭೂದೇವಿಯೇ
ನೀನೇನೋ ಕ್ಷಮಯಾಧರಿತ್ರಿ
ನಿನ್ನ ತಾಳ್ಮೆಗೆ ಸರಿಯಲ್ಲ ಈ ಇಳೆಯು
ಪಾಪಿ ಮನುಜರ ಪಾಪದ ಕೊಡ ತುಂಬಿ ತುಳುಕುತಿದೆ:

ನೀನೇನೋ ಕ್ಷಮಯಾಧರಿತ್ರಿ ಎಂದು
ಮಾಡುವುದೇ ಪಾಪವ ಇಷ್ಟೊಂದು?
ತಾವೇನು ಮದುಥಿರುವೆವು ಎಂಬ ಅರಿವು
ಈ ಪಾಪಿ ಮನುಜರಿಗೆ ಇಲ್ಲವು !

ಮೂಕ ಪ್ರಾಣಿಗಳಿಗೆ ಕೊಡುವ ಹಿಂಸೆ ಏನು
ದೀನ ದಲಿತರಿಗೆ ಕೊಡುವ ನೋವೇನು ?
ಮೇಲು ಕೀಳು ಎಂಬ ಭೇದವೇನು?
ನಾನು ತಾನು ಎಂಬ ಅಹಂ ಏನು?
ಅವರ ತಪ್ಪಿಗೆ ಶಿಕ್ಷೆಯೇ ಇಲ್ಲವೇ?

ನೀನೇನೋ ಕ್ಷಮಯಾಧರಿತ್ರಿ ಎಂದು
ಮಾಡುವುದೇ ಪಾಪವ ಇಷ್ಟೊಂದು?
ನಿನ್ನ ತಾಳ್ಮೆಗೆ ಸರಿಯಲ್ಲ ಈ ಇಳೆಯು
ಹೇ ಭೂದೇವಿ ನಿನಗೆ ಇದೋ ನನ್ನ ನಮನ
 

ಹಿರಿಯ ತಾತ




ಕೊಕೊಕೋ ಕೋಳಿಯ ಕೂಗು ಎಚ್ಚರಿಸಿದರೂ
ಹಕ್ಕಿಗಳ ಚಿಲಿ ಪಿಲಿ ಕಲರವ ಕಿವಿಗೆ ಬಿದ್ದರೂ
ಬೆಡ್ ಕಾಫಿ ಸಿಗುವ ತನಕ ಏಳುವುದೇ ಇಲ್ಲ ಇವನು
ಊರಿಗೆಲ್ಲ ತಾತ ಬಲು ಹಿರಿಯ ತಾತ ಇವನು :

ತಾತ ನಾಡುವ ಮಾತು ಕೇಸರಿ ಬಾತಿ ನಷ್ಟೇ ಸಿಹಿ ಎಂದು
ಬಾಯಿತುಂಬ ಹೊಗಳುವರು ಊರಿನವವರು ಎಂದೂ
'ರೈಲು' ಬಿಡುವೆನೆಂದು 'ಸ್ಮೈಲು' ಮಾಡುವ ತಾತನಿಗೆ
ಅರೆಬರೆ ಇಂಗ್ಲಿಷ್ ಬಂದರೂ ಇವನ ಮಾತು ಕೇಳಿ ನಗುವರೆಲ್ಲರು 


ಕೈಲಿ ನಶ್ಯದ ಸೀಸೆ , ತಾಂಬೂಲ ಮೆಲುವಾಸೆ
ನಾಟಕ-ಯಕ್ಷಗಾನ ಎಂಬ ಹುಚ್ಚಾಸೆ ಇವನಿಗೆ
ಅರೋಗ್ಯ ಸರಿ ಇಲ್ಲ ತಾತನಿಗೆ ಇತ್ತಿಚ್ಚೆಗೆ
ಆದರೂ ಊರೆಲ್ಲ ಸುತ್ತಾಟ ಇವನಿಗೆ : 


ಮುಖದಲ್ಲಿ ಗೆಲುವಿದೆ ; ಮಂದಹಾಸದ ನಗುವಿದೆ
ನುಡಿದಂತೆ ನಡೆಯುವ , ಮಕ್ಕಳನು ನಗಿಸುವ
ಕೈಲಿ ದಿನ ಪತ್ರಿಕೆ ಹಿಡಿದು ಓದುತ್ತಲಿರುವ
ಊರಿನವರಿಗೆಲ್ಲ ಪ್ರಿಯನಾದ ಬಲು ಹಿರಿಯ ತಾತ ಇವನು : 

ಕಾಫಿ ................

 

ಕಾಫಿ ಮಾಡಿರಿ ತಂದು ನೀಡಿರಿ
ನಮ್ಮ ಉದಾರವ ಸೇರಲಿ
ಕಾಫಿಗಾಗಿಯೇ ತೊಳಲಿ ಬಳಲುವ
ನಮ್ಮ ತಹಗುದಿ ಆರಲಿ : 
ದೊಡ್ಡ ಬಟ್ಟಲು ಹಿಡಿದು ಕೈಯಲಿ
ಬಿಸಿಯ ಕಾಫಿಯ ಆರಿಸಿ
ಗುಟುಕು ಗುಟುಕಾಗಿ ಇಳಿಸಿ ಗಂಟಲಿಗೆ
ತನುವ ಸುಧಾರಿಸಿ ಹರ್ಷಿಸಿ :
ದೂರದಿಂದಲಿ ತೇಲಿ ಬರುವ
ಕಾಫಿ ಸುವಾಸನೆಯ ಹೀರಿರಿ
ಸರ್ವರನು ಮರಳುಗೊಲಿಸೋ
ದೇವಲೋಕದ ಸುಧೆಯಿದು
ದೇವಲೋಕದಿಂದ ಧರೆಗಿಳಿದ
ದಿವ್ಯಕರದ ಮಧುವಿದು
ಸರ್ವ ಕಾಲಕು ಸರ್ವ ಕೆಲಸಕು
ಸರ್ವರಿಗೂ ಸ್ಪೂರ್ತಿಕಾರಿಯು
ಈ ಕಾಫಿಯು  :
ವಿಶ್ವತೋಮುಖವಾಗಿ ಹರಡಿದೆ
ವಿಶ್ವರೂಪಿ ಈ ಕಾಫಿಯು
ವಿಶ್ವದಲ್ಲೆಲ್ಲ ಇನ್ಸ್ಟಂಟ್ ಕಾಫಿಯು
ಈ ಧಿಡೀರ್ ಜನಪ್ರಿಯ ಕಾಫಿಯು :

ಪ್ರಕೃತಿ

'ಹಸಿರ ಹಾದಿ- ಪ್ರಕೃತಿಯ ತಂಪನೆ ಹಾಸಿಗೆ '



ನಾನೊಬ್ಬಳು ಸೌನ್ದರ್ಯೋಪಾಸಕಿ
ಪ್ರಕೃತಿಯ ಸೌಂದರ್ಯ ಸವಿಯುವ
ಸವಿಯ ಬಯಸುವ ಕಲೋಪಾಸಕಿ
ಪ್ರಕೃತಿಯ ತಂಪನೆ ಮಡಿಲು
ತಾಯಿಯ ಪ್ರೇಮದ ಒಡಲು
ಜೀವನದಿ ಇನ್ನೇನು ಬೇಕು
ಪ್ರಕೃತಿಯ ಸವಿಯೊಂದಿರಲು?
ಪ್ರಕೃತಿಯ ಹಚ್ಚನೆ ಹಸಿರು
ನನ್ನ ಬಾಳಿಗೆ ಪ್ರೀತಿಯ ಉಸಿರು
ಪ್ರಕೃತಿಯ ಸೌಂದರ್ಯವನ್ನು
ಸವಿದಷ್ಟೂ ನನ್ನ ಹಸಿವು ತನಿಯುವುದಿಲ್ಲ!

ಸುಖಬಾಳ್ವೆಗೆ ಕಿವಿಮಾತು




ಬಾಳಿ ಬದುಕಬೇಕೆಂಬಾಸೆ ಇದ್ದಲ್ಲಿ
ಹೂಡಿರಿ ಮೋಸದ ತಂತ್ರವ
ಆಗ ನೋಡಿರಿ ನಿಮ್ಮ ಕಷ್ಟಗಳೆಲ್ಲ
ಮಂಜಿನಂತೆ ಕರಗಿ ಹೋಗುತ್ತದೆ !
ಸತ್ಯಹರಿಶ್ಚಂದ್ರನಂತೆ ನಡೆದಿರೋ
ಸತ್ಯಕ್ಕೆ ಬೆಲೆ ಇಲ್ಲವಿಲ್ಲಿ
ಗಾಂಧಿ ಮಹಾತ್ಮಾ ನಂತಾದಿರೋ
ಅಹಿಂಸೆಗೆ ನೆಲೆ ಇಲ್ಲವಿಲ್ಲಿ !
ನ್ಯಾಯಾ ನೀತಿಯ ದಾರಿಯಲ್ಲಿ
ನಡೆದರೆ ನಿಮಗೆ ಕಷ್ಟ-ನಷ್ಟಗಳೇ ಹೆಚ್ಚು
ಮೋಸ ಅಧರ್ಮದಿಂದ ನಡೆದರೆ
ಸುಳ್ಳಿನ ಸರಪಣಿಯ ಹೆಣೆದರೆ
ನೀವೂ ರಾಜ ರೋಷದಿಂದ
ಬದುಕು ನಡೆಸಬಹುದು !

ಹೆಣ್ಣು

ಹೆಣ್ಣು ಹೆಣ್ಣು ಎಂದೇಕೆ ಜರಿಯುವಿರಿ ?



ಹೆಣ್ಣು ಮಾಯೆಯೆ ?
ಜನಿಸುವ ಮೊದಲು ಹೆಣ್ಣಿನ ಒಡಲು
ಜನಿಸಿದ ಮೇಲೆ ಹೆಣ್ಣಿನ ಮಡಿಲು
ಗುರುವಾಗಿ ತಾಯಿ ಮೊದಲು
ವಿವಾಹದ ನಂತರ ಹೆಣ್ಣಿನ ತೊಲೋಳು
ವಯಸಾದ ನಂತರ ಹೆಣ್ಣಿನ ಹೆಗಲು
ಪ್ರತಿ ಹಂತದಲ್ಲೂ ನಿಮಗಿರೆ ಹೆಣ್ಣಿನ ಆಸರೆ
ಹೆಣ್ಣು ಹೆಣ್ಣು ಎಂದೇಕೆ ಜರಿಯುವಿರೆ
ಹೆಣ್ಣು ಮಾಯೆಯಲ್ಲ ಅಲ್ಲವೇ ?
 

ಅವಳಿ ಪದಗಳು





ಕನಸು-ನನಸುಗಳೆರಡು 
ನಮ್ಮೊಟ್ಟಿಗೆ ಇರಲಿ
ಪ್ರೀತಿ-ಪ್ರೆeಮವೆರಡೂ
ನಮ್ಮೊಟ್ಟಿಗೆ ಇರಲಿ
ಸುಖ-ಸಂತೋಷಗಳೆರಡು ನಮ್ಮೊಟ್ಟಿಗೆ ಇರಲಿ
ಸ್ನೇಹ-ಪ್ರೀತಿಗಳೆರಡು ನಮ್ಮೊಟ್ಟಿಗೆ ಇರಲಿ
ಬಂಧು-ಬಂಧವರೆಲ್ಲರೂ  

ನಮ್ಮೊಟ್ಟಿಗೆ ಇರಲಿ   
ಕಷ್ಟ-ಸುಖಗಳೆರಡು
ನಮ್ಮೊಟ್ಟಿಗೆ ಇರಲಿ 
ನೋವು-ನಲಿವುಗಳೆರಡು ನಮ್ಮೊಟ್ಟಿಗೆ ಇರಲಿ
ಭರವಸೆ-ಆತ್ಮ ವಿಶ್ವಾಸ
ಗಳೆರಡು ನಮ್ಮೊಟ್ಟಿಗೆ ಇರಲಿ
ಈ ಅವಳಿಗಳೊಂದಿಗೆ ಸಮರಸದ ಬದುಕು 

ನಮ್ಮೊಟ್ಟಿಗೆ ಇರಲಿ

ಅಂತೆ - ಕಂತೆ





ಈ ಜಗವು ಒಂದು ನಾಟಕ ರಂಗವಂತೆ
ನಾವೆಲ್ಲಾ ಇಲ್ಲಿ ಪಾತ್ರಧಾರಿಗಳಂತೆ
ಪಾತ್ರ ನಿರ್ವಹಿಸುವ ರಂಗಸ್ಥಳವಿದಂತೆ
ನಾವೆಲ್ಲಾ ಬಣ್ಣ ಹಚ್ಚ ಬೇಕಂತೆ :
ನಮ್ಮ ನಮ್ಮ ಪಾತ್ರವ ಕಾಯಬೇಕಂತೆ
ನಮ್ಮ ಪಾತ್ರ ಬಂದಾಗ
ನಿರ್ವಹಿಸಬೇಕಂತೆ
ನೈಜ್ಯತೆ ಎದ್ದು ಕಾಣುತಿರಬೇಕಂತೆ
ನಾಟಕೀಯತೆಯ ಸೋಗು ಬೇಡವಂತೆ :
ಹೇಳುವವ ಮಾಡಿಸುತಾನಂತೆ
ಕೇಳಿಸಿಕೊಂಡವ ನಡೆಸುತಾನಂತೆ
ಪುರಾಣ ಹೇಳುವುದಕಂತೆ
ಬದನೆ ಕಾಯಿ ತಿನ್ನುವುದಕಂತೆ !

ತ್ಯಾಗಮಯಿ ತಾಯೀ !!!




ತಾಯಿಯ ಗರ್ಭದಲ್ಲಿ ಇರುವ ಮಗುವಿನ
ನಿರೀಕ್ಷೆಯಲ್ಲಿ ತಾಯಿ ಕಾತುರದಿಂದ
ಕಾದೂ ಕಾದೂ ನವಮಾಸಗಳು
ತುಂಬುವುದನ್ನೇ ಎದಿರು ನೋಡುತ್ತಾಳೆ
ತನ್ನ ಮುದ್ದು ಮಗು ಈ ಲೋಕಕ್ಕೆ
ಅಡಿ ಇಡುತ್ತಲೇ ತಾನು ಒಂಭತ್ತು ತಿಂಗಳು
ಪಟ್ಟ ನೋವು, ಯಾತನೆ ಎಲ್ಲವನ್ನು
ಮರೆತು ಆ ಪುಟ್ಟ ಕೂಸಿನ
ಆರೈಕೆ, ಅದಕ್ಕೆ ತಿನ್ನಿಸುವುದು
ಉನ್ನಿಸುವುದೇ ಅವಳ ಸುಖ-ಸಂತೋಷ
ಅದೇ ತನ್ನ ಪ್ರಪಂಚ ಎಂದು
ತನ್ನೆಲ್ಲ ನೋವಿನಲೂ
ನಗು ನಗುತ ಮಗುವನ್ನು
ಸಾಕಿ ಸಲಹುವ ತಾಯಿ !
ಲಾಲಿ ಹಾಡಿ ಮಲಗಿಸುವ ತಾಯಿ !
ಮಗುವಿನ ಬೆಳವಣಿಗೆ ನೋಡಿ
ಹಿಗ್ಗಿ ಹಿಗ್ಗಿ ಹೀರೆಕಾಯಿ ಆಗುತ್ತಾಳೆ !!!
ತಾಯಿ ತಾಯಿ ಹೊರುವಳು ಮಗುವಿನ ಭಾರ
ತಾಯಿ ತಾಯಿ ಹರಸುವಳು ಮಕ್ಕಲ್ಲನ್ನೆಲ್ಲ
ತ್ಯಾಗಮಯಿ ತಾಯೀ !!!

ದೇವರ ಇರುವಿಕೆ !!!


ದೇವರೇ ನೀನು ಇರುವೆ
ಇರುವೆ ನೀನು ಎಲ್ಲೆಲ್ಲು ಇರುವೆ
ಎಲ್ಲೆಲ್ಲು ಇರುವೆ ನೀನು
ಇರುವೆಯಲ್ಲೂ ಇರುವೆ
ಇರುವೆಯಲ್ಲೂ ಇರುವೆ ನೀನು
ನನ್ನಲ್ಲೂ ಇರುವೆ
ನನ್ನಲ್ಲೂ ಇರುವೆ  ನೀನು
ಈರೇಳು ಲೋಕದಲ್ಲೂ ಇರುವೆ
ಈರೇಳು ಲೋಕಾಗಲ್ಲಲ್ಲೂ ಇರುವೆ ನೀನು
ಸಕಲ ಚರಾಚರದಲ್ಲೂ ಇರುವೆ!!
ದೇವರೇ ನೀನು ಇರುವೆ !!!

ಸಮಯೋಚಿತೆ


ಕನ್ನಡದ ಅಭಿಮಾನಿ ಉಮಾ ಪ್ರಕಾಶ್ .




ನಾನೊಬ್ಬಳು ಕನ್ನಡಾಭಿಮಾನಿ
ಹಾಗೆಂದ ಮಾತ್ರಕ್ಕೆ
ನಾನೇನು ಅನ್ಯ ಭಾಷಾ ವಿರೋಧಿಯಲ್ಲ!
ಆದರೂ ಸ್ನೇಹಿತರೆಲ್ಲ ಕೇಳುತ್ತಾರೆ
ನೀವ್ಯಾಕೆ ಅನ್ಯ ಭಾಷೆ
ಬಳಸುವುದಿಲ್ಲ ಎಂದು;
ಆದರೆ ನನ್ನ ಉತ್ತರ ಬಲ್ಲಿರಾ?
ಬಳಸುತ್ತೇನೆ ಆದರೆ ಮಿತವಾಗಿ ;
ಸಮಯೋಚಿತವಾಗಿ!
ಈ ಕನ್ನಡಾಭಿಮಾನಿಯ
ಉತ್ತರ ಸರಿ ಅಲ್ಲವೇ?