Wednesday 27 May 2015

ಇಂದ್ರಿಯ ನಿಗ್ರಹ


 ಇಂದ್ರಿಯ  ನಿಗ್ರಹ 

ಸುಂದರ ಮನಸ್ಸು ಮಗುವಿನಂತೆ , ಹೂವಿನಂತೆ, ಧುಮ್ಮಿಕ್ಕುವ ಜಲಧಾರೆಯಂತೆ 
ಎಷ್ಟು ಪ್ರಶಾಂತತೆ ಇಂದ ಕಣ್ಮನ ಸೆಳೆಯುತ್ತದೆಯೋ 
ಅಷ್ಟೇ ಪ್ರಕ್ಷುಬ್ಧ ವಾಗಿ ಒಣಗಿದ ಹೂವಿನಂತೆ, ಬತ್ತಿ ಹೋದ ಜಲಾಶಯದಂತೆ 
ಕಲುಷಿತ ಗೊಂಡ  ಕೆರೆಯಂತೆ ಮನಸ್ಸು ಜರ್ಜರಿತಗೊಂಡರೆ !!!

ಮನಸ್ಸೇ ಓ ಮನಸ್ಸೇ ಎಂಥಾ ಮನಸ್ಸೇ ಮನಸೇ ಒಳ ಮನಸೇ 
ಒಳ ಮನಸನ್ನು ನಿಗ್ರಹಿಸದಿದ್ದರೆ , ಹಿಡಿತದಲ್ಲಿ ಇರದಿದ್ದರೆ 
ಮನಸ್ಸಿಗೆ ಘಾಸಿಯಾದರೆ , ಕ್ಷೋಭೆಯುಂಟಾದರೆ 
ಅದನ್ನು ಹಿಡಿದಿಡುವುದು ಗಾಳಿಯನ್ನು ಹಿಡಿದಿದುವಷ್ಟೇ ಕಷ್ಟ !!!

ಮನಸ್ಸಿನಲ್ಲಿ ಉಂಟಾಗುವ ಕೋರಿಕೆಗಳು 
''ಆಸೆಯೇ ದುಃಖಕ್ಕೆ ಮುಲಾ''   ಎಂಬಂತೆ 
ಆಸೆಗಳು ಈಡೇರ ದಿದ್ದರೆ ಮನಸ್ಸಿನಲ್ಲಿ ಕೋಲಾಹಲ 
ಈಡೇರುವಂತೆ ಮಾಡುವಾಗ ಉಂಟಾಗುವ ಹಾಲಾಹಲ 
ಓ ಮನಸ್ಸೇ ನಿನ್ನ ಪರಿಯ ಬಲ್ಲವರ್ಯಾರು !!!

ಮನಸೆಂಬ ಪಂಜರದಲ್ಲಿ ಪ್ರೀತಿ ಬಂದಾಗ  
ಮುಡುವ ಭಾವನೆ ಆಕರ್ಷಕ, ಸುಂದರ, ಕೋಮಲ, 
ಅದೇ ಮನಸೆಂಬ ಪಂಜರದಲ್ಲಿ ಕ್ರೋಧ ಉಂಟಾದರೆ 
ಆ ಮನಸ್ಸು ವಿಷ ಪೂರಿತವಾಗಿ ವಿಕಾರಗೊಳ್ಳುತ್ತದೆ 
ಯೋಗ ಮಾಡಿ ಮನಸ್ಸನ್ನು ಒಂದೇ ಕಡೆ ಕೇಂದ್ರಿಕೃತ ಗೊಳಿಸಿ 
'ಇಂದ್ರಿಯ ನಿಗ್ರಹ' ಸಾಧ್ಯವಾದರೆ ಮನಸಿನ ಚಂಚಲತೆಯನ್ನು 
ಹೊಡೆದೋಡಿಸಿ ಬೇಡಿಕೆಗಳನ್ನು ತ್ಯಜಿಸಿದರೆ 
ಸುಂದರ ಬಾಳು ನಿಮ್ಮದಾಗುತ್ತದೆ !!!! 


Saturday 23 May 2015

ಪ್ರತಿಫಲಾಪೇಕ್ಷೆ





ತೆಂಗಿನ ಮರ ಬೆಳೆಸಿದವನಿಗೆ ಅದರ ಎಳ ನೀರು ಕುಡಿಯೋ ಅದೃಷ್ಟ ಇರೋಲ್ಲ ,
ಜೀವ  ತೈದು ಸಾಕಿದ ಮಕ್ಕಳಿಂದ ವೃದ್ಧಾಪ್ಯ ದಲ್ಲಿ ಆಸರೆ ಸಿಗೋದಿಲ್ಲ  !!
ತನ್ನ ಮಕ್ಕಳಿಂದ ತನ್ನ ಕೊನೆಗಾಲದಲ್ಲಿ ಆಸರೆ ಬಯಸುವುದು ತಪ್ಪೇ ?
ಯಾರಿಂದ ಏನನ್ನು ಅಪೇಕ್ಷಿಸದೆ ಇದ್ದರೆ ಅವನು ದೇವರಾಗುತ್ತಾನೆ
ಇಲ್ಲದಿದ್ದರೆ ಅವನೊಬ್ಬ 'ಸ್ವಾರ್ಥಿ' , ಕಡು ಸ್ವಾರ್ಥಿ ' ಎಂಬ ಹಣೆ ಪಟ್ಟಿ
ಅಪೇಕ್ಷೆ ಪಟ್ಟರೆನೆ ಅವನನ್ನು ಮನುಷ್ಯ ಎನ್ನುವುದು ಅಲ್ಲವೇ ??

ಖಾಯಿಲೆ ಬಂದಾಗ ' ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ' ಎನ್ನುತ್ತಾರೆ
ಅದೇ ಪ್ರತಿ ಫಲಾಪೇಕ್ಷೆ  ಪಟ್ಟರೆ ಮಾತ್ರ ಅದು ತಪ್ಪೇ ?
ಅದು ಮನುಷ್ಯನ ಸಹಜ ಗುಣಗಳಲ್ಲಿ ಒಂದ್ದಲ್ಲವೇ ?
ಹಾಸಿಗೆ ಇದ್ದಷ್ಟೇ ಕಾಲು ಚಾಚು, ದಕ್ಕಿದರೆ ದಕ್ಕಿಸಿಕೊ
ಹಾಲಿನ ಪಾಲು ಹಾಲಿಗೆ, ನೀರಿನ ಪಾಲು ನೀರಿಗೆ,
ಹೆಣ್ಣು, ಹೊನ್ನು, ಮಣ್ಣು ಹಣೆಲಿ ಬರೆದಿದ್ದರೆ  ಮಾತ್ರ ಲಭ್ಯ ,
ಎಂಬ ನಾಣ್ಣುಡಿ ಗಳಿಂದ ಮನುಷ್ಯ ಜರ್ಜರಿತನಾಗಿದ್ದಾನೆ
ಇದಕ್ಕೆಲ್ಲಾ ಕೊನೆ ಎಂದೋ ಎಂದರಿಯದೆ ಮಮ್ಮಲ ಮರುಗುತ್ತಿದ್ದಾನೆ ??

Monday 18 May 2015

ನ್ಯಾಯಾ ಎಲ್ಲಿದೆ ??





ಏಕೊ ಕಾಣೆ ಯಾಕಾದರೂ ಭಾರತ ದೇಶದಲ್ಲಿ ಹುಟ್ಟಿದೆ
ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿರುತ್ತದೆ ???
ನಮ್ಮ ಈ ಭ್ರಷ್ಟ  ಕುಯುಕ್ತಿಯ ಸರ್ಕಾರ
ಸತ್ಯವಂತರಿಗೆ, ನೀತಿವಂತರಿಗೆ ,
ಗುಣವಂತರಿಗೆ, ದಕ್ಷ ಹಾಗೂ  ನಿಷ್ಠಾ ವಂತರಿಗೆ
ಆದರ್ಶಪ್ರಾಯರಾದಂಥಹವರಿಗೆ
ಎಂಥಹ ಬಹುಮಾನ ಕೊಡುತ್ತಿದೆ
ಎಂದು ಪ್ರತಿಯೊಬ್ಬರಿಗೂ ತಿಳಿದ ವಿಷಯವೇ ಸರಿ
ದಕ್ಷ ಐ ಏ ಎಸ್  ಅಧಿಕಾರಿ ಡಿ  ಕೆ  ರವಿ
ಅವರಿಗೆ ಇನ್ನು ನ್ಯಾಯ ದೊರೆತ್ತಿಲ್ಲ
ಅಂತಹ  ನಿಷ್ಠಾ ವಂತ ಅಧಿಕಾರಿಯ
ನಿಗೂಢ ಸಾವು ನಮ್ಮೆಲ್ಲರನ್ನೂ ಬೆಚ್ಚಿ ಬೀಳಿಸಿದೆ 
ಒಳ್ಳೆಯ ತನವನ್ನು ಒಗ್ಗೂಡಿಸಿ  ಕೊಳ್ಳಿ 
ಎಂದು ಮಕ್ಕಳಿಗೆ ಉಪದೇಶಿಸುತ್ತಿದ್ದ 
ತಂದೆ-ತಾಯಿ ಯರಿಗೆ ಮಕ್ಕಳು ಕೇಳುವ ಒಂದೇ ಪ್ರಶ್ನೆ 
ಯಾಕಮ್ಮಸತ್ಯ  ನ್ಯಾಯ ನೀತಿ ಧರ್ಮ ಇವೆಲ್ಲ
 ಎಲ್ಲಿ ಮರೆಯಾಗುತ್ತಿದೆ ಇನ್ನು ಮುಂದೆ ಪುಸ್ತಕ ದಲ್ಲಷ್ಟೇ 
ಓದಬೇಕಾಗುತ್ತದೆ, ಕಲ್ಪನೆ ಮಾಡಿ ಕೊಳ್ಳ ಬೇಕಾಗುತ್ತದೆ 
ಹೌದು ನಾನು ಕೂಡ ಉತ್ತರ ಕೊಡಲಾಗದೆ 
ನಿರುತ್ತರ ಳಾ ಗಿದ್ದೇನೆ !!!!

ಇಂತಹ ಒಳ್ಳೆಯ ಮಕ್ಕಳನ್ನು ಉಳಿಸಿ ಕೊಳ್ಳ ಲಾರದ 

ಹೇ ಭಾರತ ಮಾತೆ ನಿನಗೆ ಧಿಕ್ಕಾರವಿರಲಿ 
ಇಂತಹ ಒಳ್ಳೆ ಮಗನನ್ನು ಹೆತ್ತ ಆ ತಾಯಿಗೆ 
ನ್ಯಾಯ ನೀಡದ 'ನ್ಯಾಯ ದೇವತೆ' ನಿನಗೆ ಧಿಕ್ಕಾರವಿರಲಿ 
 F M  ನಲ್ಲಿ ನನ್ನ ಕಿವಿಗೆ ಕರ್ಕಶವಾಗಿ ಕೇಳುತ್ತಿದೆ 
'ನ್ಯಾಯಾ  ಎಲ್ಲಿದೆ ?? 'ನ್ಯಾಯಾ  ಎಲ್ಲಿದೆ ''




ತೋಚಿದ್ದನ್ನು ಗೀಚು


ತೋಚಿದ್ದನ್ನು ಗೀಚು 


ಹೆಣೆಯಲೊಂದು ಬುಟ್ಟಿ ಬೇಕು
ಕಟ್ಟಲು ಬುಟ್ಟಿ ತುಂಬಾ ಹೂ ಬೇಕು
ಹೂಗಳ ಮಾಲೆ ಹಾಕಲು ಬೇಕು
ದೇವರ ಪಟವೊಂದಿರ ಬೇಕು

ದೇವರ ಪಟ ಇಡಲು ಬೇಕೊಂದು
ಪೂಜಾ ಕೊಠಡಿ ಅಲ್ಲಿ ಇರ ಬೇಕು
ಪೂಜಾ ಕೊಠಡಿಯಲ್ಲಿ  ಹಚ್ಚಲು ಜೋಡಿ ದೀಪ ಬೇಕು
ಜೋಡಿ ದೀಪ ಹಚ್ಚಲು  ಜೋಡಿ ಕೈಗಳು ಬೇಕು
ಜೋಡಿ ಕೈಗಳ  ಹಿಂದೆ ಭಕ್ತಿಯ ಭಾವ ಬೇಕು
ಭಕ್ತಿ ಭಾವ ತುಂಬಿದ ಮನಸ್ಸಿಗೆ ಬೇಕು
ಸುಂದರ ಶಾಂತ ವಾತಾವರಣ :::

ಹಾಸಲೊಂದು ಮೆತ್ತನೆ ಹಾಸಿಗೆ ಬೇಕು
ಮೆತ್ತನೆ ಹಾಸಿಗೆ ಮೇಲೆ ಶಾಂತ ನಿದ್ರೆ ಬೇಕು
ನಿದಿರೆಯಲ್ಲಿ  ಸುಂದರ ಕನಸ್ಸು ಮೂಡಬೇಕು
ಕನಸ್ಸಿನಲ್ಲಿ ನಮ್ಮ ಕನಸು ನನಸಾಗ ಬೇಕು
ಕನಸ ಮುಗಿಸಿ ಕಣ್ ತೆರೆದಾಗ
ತುಟಿಯಲ್ಲಿ ಕಿರು ನಗು ಚಿಮ್ಮಬೇಕು  :::

ಬರೆಯಲೊಂದು ಒಳ್ಳೆ ವಿಷಯ ಬೇಕು
ಭಾವನಾಲೋಕದಲ್ಲಿ ವಿಹರಿಸಲು ಬೇಕು
ತೋಚಿದ್ದನ್ನು ಗೀಚ ಬೇಕು
ಗೀಚಿದ ವಿಷಯ ಎಲ್ಲರ ಮ್ಯಾನ್ ಸೆಳೆಯ  ಬೇಕು
ಬರೆಯಲೊಂದು ಒಳ್ಳೆ ವಿಷಯ ಬೇಕು :::



ವರುಣನ ಆರ್ಭಟ






ವರುಣನ ಆರ್ಭಟ

ಈ ಮಳೆಯ ಆರ್ಭಟದಿಂದ ಆಗುತ್ತಿರುವ ಹಾನಿ
ಹಲೋ Mr. ವರುಣ ದೇವ ಇದೇನು ನಿನ್ನ ಕಹಾನಿ ???
ಗುಡುಗು ಸಹಿತ ಬಿರುಗಾಳಿ ಮಳೆ ಇಂದ ಜನರು ಕಂಗಾಲಾಗಿದ್ದಾರೆ
ಎಲ್ಲಿ ನೋಡಿದರೂ ಭಾರಿ ಮರಗಳನ್ನು ಬುಡಮೇಲು ಮಾಡಿರುವೆ 
ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಕಡಿತ ಬೇರೆ
ವರುಣ ವಾಯು ಇವರೀರ್ವರ ಅರ್ಭಟ ತಡೆಯಲಾರೆವು
ಶಾಂತರಾಗಿ ವಾಯು ವರುಣರೆ ಶಾಂತರಾಗಿ
ನಿಮ್ಮ ಈ ವಿಕೋಪದಿಂದ ನಾವು ಮನುಜರಷ್ಟೇ ಅಲ್ಲಾ
ಪ್ರಾಣಿ ಪಕ್ಷಿ ಸಂಕುಲ, ಗಿಡ ಮರಗಳು ಎಲ್ಲರ ಜೀವ ಕೈಗೆ ಬಂದಿದೆ
ಇದರ ಮಧ್ಯೆ ಭೂದೇವಿ ಕೂಡ ಮುನಿಸಿಕೊಂಡು ಕಂಪಿಸಿದರೆ
ನಮ್ಮ ಗತಿ ಅಷ್ಟೇ ಶಿವ ಶಿವ ; ಹರ ಹರ

Monday 15 December 2014

ಸುಳ್ಳು ಸುಳ್ಳು ಸುಳ್ಳು ಹಸಿ ಹಸಿ ಸುಳ್ಳು



ಜೀವನದಲ್ಲಿ ಕೆಲವೊಮ್ಮೆ ಸುಳ್ಳು ಹೇಳದೆ ವಿಧಿ ಇಲ್ಲ ಅಂತಹ ಪರಿಸ್ತಿತಿ ಉದ್ಭವ ಆಗುತ್ತೆ  ; ಕಹಿಯಾದ ಸತ್ಯ ಹೇಳುವುದಕ್ಕಿಂತ , ಸಿಹಿ ಯಾದ ಸುಳ್ಳು ಬಹಳ ಹಿತವಾಗಿರುತ್ತೆಯಾರಿಗೂ ಅದರಿಂದ ತೊಂದರೆಯಾಗಲಿ, ಅನಾನುಕೂಲವಾಗಲಿ ಆಗುವುದಿಲ್ಲ.  'ಸತ್ಯಂ ಬ್ರೂಯಾದ್, ಪ್ರಿಯಂ ಬ್ರೂಯಾದ್, ನ ಬ್ರೂಯಾದ್ ಸತ್ಯಂ ಅಪ್ರಿಯಂ' ಅಲ್ಲವೇ ? ಹಾಗಾಗಿ ಕೆಲವೊಮ್ಮೆ ಸತ್ಯ ಹೇಳೋದ್ರಿಂದ ತುಂಬಾ ಅನಾಹುತಗಳು, ಕಹಿ ಘಟನೆಗಳು, ಸಂಬಂಧ ಒಡೆದುಹೋಗುವಂತ ಘಟನೆಗಳು ನಡೆಯುತ್ತವೆ.  ಇಂತಹ ಪ್ರಸಂಗಗಳು ದಿನ ನಿತ್ಯ ಎಲ್ಲರ ಜೀವನದಲ್ಲೂ ನಡೆಯುತ್ತವೆ.  ವೈದ್ಯರು ಕೆಲವೊಮ್ಮೆ, ರೋಗಿಗಳು ಜೀವಂತವಾಗಿರಲು ಅವರ ಆಯಸ್ಸುಕೆಲವೇ ತಿಂಗಳು ಅಥವಾ ಕೆಲವೇ ದಿನಗಳೇ ಆಗಲಿ ಇರುವಾಗ ವೈದ್ಯರು ಅಂತಹ ಸಂಧರ್ಭಗಳಲ್ಲಿ ಸುಳ್ಳು ಹೇಳಲೇ ಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ ಹಾಗೂ  ಅನಿವಾರ್ಯವಾಗಬಹುದು. ರೋಗಿಯ ಬಂಧುಗಳಿಗೆ ನಿಜ ಹೇಳಲೇ ಬೇಕಾಗುತ್ತದೆ. ಆದರೆ ರೋಗಿಯ ಹತ್ತಿರ ಇಂತಹ ಕಹಿ ಸುಳ್ಳನ್ನು ಹೇಳಿ ಅವನ ಉಳಿದಿರುವ ಕೆಲವು ದಿವಸಗಳನ್ನು ಜೀವಂತ ನರಕ ಮಾಡುವುದು ಸರಿಯೇ?  ಅವನಿಗೆ ನಿಜಾಂಶ ತಿಳಿಸದೆ ಹೋದರೆ ಅವನು ಇನ್ನು ಸ್ವಲ್ಪ ಹೆಚ್ಚು ದಿನ ಬದುಕುಳಿಯಬಹುದು ಅಥವಾ ಅವನ ಅರೋಗ್ಯ ಸುಧಾರಿಸಿ ಚೇತರಿಸಿ ಕೊಳ್ಳಲೂ ಬಹುದು ! ರೋಗಿಯು ಬದುಕಿರುವನಕ ಅವನನ್ನು ಖುಷಿಯಾಗಿ ಇಟ್ಟು ಕೊಳ್ಳುವುದೇ ವೈದ್ಯರ ಧ್ಯೇಯ ಕೂಡ.  ಸಿಹಿ ಸುಳ್ಳು ನಿಜ ಗೊತ್ತಾದಾಗ ಕಹಿ ಆಗುತ್ತದೆ ..ಮಗ ಫಸ್ಟ್ ಕ್ಲಾಸ್ ಅಂತ ತಂದೆ ತಾಯಿ ಖುಶಿಪಟ್ಟಿರುತ್ತಾರೆ .ನಿಜ ಗೊತ್ತಾದಾಗ ತುಂಬಾ ದುಃಖ ವಾಗುತ್ತದೆ .ಸಂಕಷ್ಟದಲ್ಲಿರುವವರನ್ನು ಪಾರು ಮಾಡಲು ಸುಳ್ಳು ಹೇಳಿದರೆ ಅದು ಒಳ್ಳೆಯ ಕೆಲಸಕ್ಕಾಗಿ .ಸಾವಿರ ಸುಳ್ಳು ಹೇಳಿ ಮದುವೆ ಮಾಡುವುದು ತೊಂದರೆಯೇ ..ವಾಸ್ತವ ಗೊತ್ತಾದಾಗ ಆಗುವ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು .ಸುಳ್ಳು ಒಂದು ಆಯುಧವಾದರೆ ಅದನ್ನು ನಮ್ಮ ,ಬೇರೆಯವರ ರಕ್ಷಣೆಗೆ ಬೇಕಾದರೂ ಉಪಯೋಗಿಸಬಹುದು ,ಇಲ್ಲವೇ ತೊಂದರೆ ಕೊಡಲು ,ಹಿಂಸೆ ಮಾಡಲೂ ಉಪಯೋಗಿಸಬಹುದು  ನೋಡಿ ಇದು ' ಒಳ್ಳೆ ಸುಳ್ಳು'  ಅಲ್ಲವೇ ಸ್ನೇಹಿತರೆ ??  ಹಾಗಾಗಿ ನಾನು ಈ ನಿರ್ಧಾರಕ್ಕೆ ಬಂದೆ ''ಕಹಿಯಾದ ಸತ್ಯ ಹೇಳುವುದಕ್ಕಿಂತ , ಸಿಹಿ ಯಾದ ಸುಳ್ಳು ಹೇಳುವುದೇ ಲೇಸು'' ಹಾಗೆ ಯೋಚಿಸುತ್ತ ಈ ಲೇಖನ ಬರೆಯಲು ಸ್ಪೂರ್ತಿ ಬಂತು !!

ಸುಳ್ಳು ಗಳಲ್ಲಿ ಹಲವು ವಿಧ.  ೧) ಶುದ್ದ ಸುಳ್ಳು ೨) ಸಿಹಿ ಸುಳ್ಳು ೩) ಕಹಿ ಸುಳ್ಳು ೪) ಸ0ಕಷ್ಟದಿಂದ ಪಾರು ಮಾಡೋ ಸುಳ್ಳು ೫) ಸಹಾಯ ಮಾಡಲು ಸೃಷ್ಟಿಸುವ ಸುಳ್ಳು ೬) ಸಾವಿರ ಸುಳ್ಳು ಹೇಳಿ 'ಮದುವೆ'  ಮಾಡೋ ಸುಳ್ಳು
೭) ಹುಟ್ಟು ಸುಳ್ಳು ಇತ್ಯಾದಿ ಇತ್ಯಾದಿ ......

೧)  ಶುದ್ದ ಸುಳ್ಳು  ಅಂದ್ರೆ ಅದರಲ್ಲಿ ಒಂದಿಷ್ಟೂ ಸತ್ಯಾಂಶ ಇರುವುದಿಲ್ಲ ; ಅದು 'ಶುದ್ದ ಸುಳ್ಳು'
೨)  ಸಿಹಿ ಸುಳ್ಳು  ಅಂದ್ರೆ ಕೆಲವೊಮ್ಮೆ ನ ಪಾಸಾದ ವಿಧ್ಯಾರ್ಥಿ 'ನಾನು ಫಸ್ಟ್ ಕ್ಲಾಸ್ನಲ್ಲಿ ಪಾಸಾದೆ' ಅಂತ ತನ್ನ ಪೋಷಕರಿಗೆ ಹೇಳಿದಾಗ ಅವರಿಗಾಗುವ ಆನಂದ ಹೇಳತೀರದು ಅಲ್ವೇ ?
೩)  ಕಹಿ ಸುಳ್ಳು  ಅಂದ್ರೆ ನಿಮ್ಮ ಅಜ್ಜಿಗೆ ಸೀರಿಯಸ್ ಅಂತ ಮೆಸೇಜ್ ಕೊಡ್ತಾರೆ , ಆದ್ರೆ ಅಜ್ಜಿ ಶಿವ ಪಾದ ಸೇರಿ ಕೊಂಡು ಗಂಟೆಗಳೇ ಕಳೆದಿರುತ್ತೆ; ಯಾಕೆಂದ್ರೆ ಸಾವಿನ ಸುದ್ದಿ ಇನ್ನೂ ಕಹಿಯಾಗಿರುತ್ತೆ, ಜೀರ್ಣಿಸಿಕೊಳ್ಳಲು ಕಷ್ಟ ಅಲ್ವೇ ?
೪) ಯಾರನ್ನೇ ಅಗಲಿ ಅವರನ್ನು ಸಂಕಷ್ಟ ದಿಂದ ಪಾರು ಮಾಡಲು ಒಂದು ಸುಳ್ಳು ಹೇಳಿದರೆ ಅಡ್ಡಿ ಇಲ್ಲ ಅಲ್ವೇ ? ಒಮ್ಮೆ ಸನ್ಯಾಸಿ ಯೊಬ್ಬ ಧ್ಯಾನದಲ್ಲಿರುವಾಗ ಒಬ್ಬ ಬಡಪಾಯಿ ಪ್ರಾಣ ಭೀತಿ ಇಂದ ಬಂದು ಅವನಲ್ಲಿ ಆಶ್ರಯ ಪಡೆಯುತ್ತಾನೆ , ಆಗ ಒಬ್ಬ ಅವನನ್ನು ಕೊಲ್ಲಲು ಹುಡುಕಿಕೊಂಡು ಬಂದಾಗ ಅವನು ನಮ್ಮ ಆಶ್ರಮದಲ್ಲಿ ಇಲ್ಲ ಎಂದು ಆ ಸನ್ಯಾಸಿ ಸುಳ್ಳು ಹೇಳಿ ಅವನ ಪ್ರಾಣ ಕಾಪಾಡುತ್ತಾನೆ!
೫) ಅದೇ ರೀತಿ ಯಾರಿಗಾದರೂ ಸಹಾಯ ಮಾಡ ಬೇಕಾದಾಗ ಒಂದು ಸುಳ್ಳು ಸೃಷ್ಟಿಸಿ ಅವರಿಗೆ ಸಹಾಯ ಮಾಡುವುದರಲ್ಲಿ ಅರ್ಥ ಇದೆ ಅಲ್ವೇ ?
೬) ಮತ್ತೆ ನಮ್ಮೆ ಹಿರಿಯರು ಹೇಳಿದ್ದಾರೆ  ಸಾವಿರ ಸುಳ್ಳು ಹೇಳಿ 'ಮದುವೆ' ಮಾಡ ಬೇಕು ಅಂತ ; ಹಾಗಂದ್ರೆ ಸಾವಿರ ಸುಳ್ಳು ಹೇಳಿ ಅಂತಲ್ಲ ! ಒಂದು ಶುಭ ಕಾರ್ಯಕ್ಕೆ ಸುಳ್ಳು ಹೇಳಿದರೆ ಅಡ್ಡಿ ಇಲ್ಲ ಅಲ್ವೇ?
೭) ಇನ್ನು ಹುಟ್ಟು ಸುಳ್ಳು ಅಂದ್ರೆ ; ಕೆಲವರು ಹುಟ್ಟಿನಿಂದ ಸುಳ್ಳು ಹೇಳೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ ; ಅದೇ 'ಹುಟ್ಟು ಸುಳ್ಳು'

ಹಾಗೆ ಬರೆಯುತ್ತಾ ಹೋದರೆ ನಾನು ಕೂಡ ಸುಳ್ಳಿನ 'ಸರ ಮಾಲೆ' ಪೋಣಿಸಬೇಕಾಗುತ್ತೋ ಏನೋಪ್ಪ ! ಸುಳ್ಳಿನ ಇನ್ನೊಂದು ಅನಾನುಕೂಲತೆ. ಎಂದರೆ ನೀವು ಹೇಳಿದ ಸುಳ್ಳನ್ನ ನೆನಪಿಟ್ಟುಕೊಳ್ಳಬೇಕಾಗುವುದು.. ಬೇಡ ಬೇಡಾ ನನಗೆ ತುಂಬಾ ಮರೆವು ಸ್ವಾಮಿ !! ಸಧ್ಯಕ್ಕೆ ಇಲ್ಲಿಗೆ ನನ್ನ 'ಸುಳ್ಳಿನ ಪುರಾಣ ' ಕ್ಕೆ ಇತಿಶ್ರೀ ಹಾಡುತ್ತೇನೆ.  ಜೈ ಪುಂಡರೀಕ ವರದೇ ...............