Thursday 28 July 2011

ಅತೃಪ್ತಿ




ಬರೆಯಲು ಕುಳಿತೆನು ನಾನು
ಕಾಗದ ಲೇಖನಿಗಳ ಹುಡುಕಾಟದಲ್ಲಿ
ನನಗೆ ಹೊಳೆದ ಕವನದ ಸಾಲುಗಳೆಲ್ಲ
ಮಂಜಿನಂತೆ ಕರಗಿ ನೀರಾಗಿತ್ತು!!!!!

ಆದರೂ ಛಲ ಬಿಡದ ತ್ರಿವಿಕ್ರಮನಂತೆ
ಬರೆದೆ ಬರೆದೆ ಮತ್ತೂ ಬರೆದೆ ;
ಇನ್ನೂ ಬರೆಯುತ್ತಲಿದ್ದೇನೆ
ಆದರೆ ನನ್ನ ಕವನ ಗಳವೂವೂ
ನನಗೆ ಇನ್ನೂ ತೃಪ್ತಿ ತಂದಿಲ್ಲ!!!!! 

ಹಡೆದಮ್ಮ


'ಅಮ್ಮ' ನೀ ನನ್ನ ಹಡೆದಮ್ಮ
ಅಹುದು ನೀ ನನ್ನ
ನವಮಾಸಗಳು ಹೊತ್ತು ಹೆತ್ತು
ಸಾಕಿ ಸಲಹಿದ ಮಾತೆ !

ನವಮಾಸಗಳು ನಾ ನಿನ್ನ
ಗರ್ಭದಲ್ಲಿ ಹುದುಗಿ
ನಿನ್ನದೇ ತದ್ರೂಪು ಪಡೆದು
ಈ ಜಗಕ್ಕೆ ಅಡಿ ಇಟ್ಟೆ ನಮ್ಮ!

ನಾನೂ ಅಂಬೆಗಾಲಿಟ್ಟು ನಡೆಯುತ್ತಿದ್ದರೆ
ನೀ ನನ್ನ ಬಾಲ ಲೀಲೆಗಳನ್ನು ಕಂಡು
ಅದೆಷ್ಟು ಆನಂದ ಪಟ್ಟೆಯಮ್ಮ?

ನೀನೆನ್ನ ಪ್ರಥಮ ಗುರುವಾಗಿ
ಅಕ್ಷರಾಭ್ಯಾಸ ಕಲಿಸಿದೆ
ವಿದ್ಯೆ ಬುದ್ದಿಯನ್ನು ನೀಡಿ
ನನ್ನನ್ನು ಪದವೀಧರೆಯಾಗಿ ಮಾಡಿ
ನಾನೂ ಸರೀಕರೆದುರು ಘನತೆ-ಗೌರವದಿಂದ
ಬಾಳುವಂತೆ ಮಾಡಿ; ನಿನ್ನ ಈ ದೇಶಕ್ಕೆ
ನೀನು ಒಬ್ಬಳು ಸತ್ಪ್ರಜೆಯನ್ನು
ಉಡುಗೊರೆಯಾಗಿ ಕೊಟ್ಟೆಯಮ್ಮ!

ಹೇ ಮಾತೆ ಮುಂದಿನ ಜನ್ಮವೇನಾದರೂ
ನಾನು ಮತ್ತೆ ಜನ್ಮವೆತ್ತಿದ ಪಕ್ಷದಲ್ಲಿ
ಮತ್ತೆ ನಾನು ನಿನ್ನ ಮಗಳಾಗಿ ಜನಿಸಿ
ನಿನ್ನ ಪ್ರೀತಿಯ ಹೊಳೆಯಲ್ಲಿ
ಮೀಯುವಂತಾಗಬೇಕು
ಎಂಬುದೇ ನನ್ನ ಆಶಯವಮ್ಮ !

'ನಾಳೆ '



'ನಾಳೆ ' ಎಂಬುದು ಹಾಳು
ಸೋಮಾರಿಯಾಗದಿರಿ
ಇಂದಿನದು ಇಂದಿಗೆ
ನಾಳೆ ಎಂದೆನ್ನದಿರಿ !

ಇಂದಿನದು ಎಂದರೆ
ಈ ಘಳಿಗೆಯ ಕೆಲಸ
ಆ ಕ್ಷಣವೇ ಮಾಡಿದಿರೋ
ಬದುಕು ಸರಸ
ಇಲ್ಲವೇ ನೀರಸ !

ನಾಳೆ ಎಂಬುದೊಂದು
ದೊಡ್ಡ ಬ್ರಹ್ಮ ರಾಕ್ಷಸ
ಅದರ ಕೈಗೆನಾದರೂ
ನಿಮ್ಮ ಕೆಲಸ ಒಪ್ಪಿಸಿದಿರೋ ಜೋಕೆ !
ಅದರ ವಜ್ರ ಮುಷ್ಟಿಗೆ ಸಿಲುಕಿ
ನಿಮ್ಮ ಕೆಲಸ ಮುಂದುವರಿಯದೇ
ಹಾಗೆ ಉಳಿದು ಬಿಡುತ್ತದೆ !

ನಾಳೆ ಎಂಬುದರ ವಿನಾಶವೇ
ಇಂದು ನಮ್ಮೆಲ್ಲರ ಬಾಳಿಗೆ ಅತಿಶಯವೇ !