Tuesday 6 August 2013

ಕಲಿಗಾಲ

ಪ್ರಪಂಚವೆಂಬ ಸಂತೆಯಲ್ಲಿ
ಲಂಚಕೋರರ ಕಳ್ಳ ಸಂತೆಯಲ್ಲಿ
ಗೋಮುಖ ವ್ಯಾಘ್ರರಂತಿಲ್ಲಿ
ಮುಖವಾಡವ ಧರಿಸಿದರಿಲ್ಲಿ
ಬಾಳುವಿರಿ ಹಾಯಾಗಿ ನೀವಿಲ್ಲಿ :

ನ್ಯಾಯಕ್ಕೆ ಕಾಲವಲ್ಲವಿ ಕಲಿಗಾಲವು
ಅನ್ಯಾಯಕಿಹ ಬೆಲೆ ನ್ಯಾಯಕಿಲ್ಲವು
ಸತ್ಯ ಧರ್ಮ ನ್ಯಾಯಗಳೆಲ್ಲ
ಗೋಮುಖ ವ್ಯಾಘ್ರರ ಕಾಲ ಮೆಟ್ಟುಗಲಾಗಿಹವು

ಅಂದು ಪುಣ್ಯಕೋಟಿ ನುಡಿಯಿತು
ಸತ್ಯವೇ ನಮ್ಮ ತಾಯಿ -ತಂದೆ
ಬಂಧು-ಬಳಗ ಸಕಲವೂ ಎಂದು
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಪರಮಾತ್ಮ ಮೆಚ್ಚನೆಂದು

ಪುಣ್ಯಕೋಟಿಯ ಮಾತು ಕೇಳಿ
ಅದರ ಸತ್ಯ ಸಂಧತೆಗೆ ಮೆಚ್ಚಿ
ಹುಲಿಯೇ ಪ್ರಾಣಾರ್ಪಣೆ ಮಾಡಿಕೊಂಡಿತು
ಆದರಿಂದು ಪುಣ್ಯ ಕೋಟಿ ಯಂಥ
ಸತ್ಯ ಸಂಧರಿಗೆ ಸಿಗುತಿರುವ ಬೆಲೆ ????
ಉಮಾ ಪ್ರಕಾಶ್

4 comments:

  1. ಅಂತಹ ಪುಣ್ಯಕೋಟಿಯೂ ಇಂದಿನ ಕಾಲಕ್ಕೆ ಸಂದರೆ ಬಹುಶಃ corruptಊ!

    ReplyDelete
  2. ಸತ್ಯಕ್ಕೆ ಸುಖವಿಲ್ಲ ಸುಳ್ಳಿಗೆ ಸಾವೇ ಇಲ್ಲ ಎಂಬಂತಾಗಿದೆ ಕಲಿಗಾಲದ ಕರಾಳತೆ. ಚೆನ್ನಾಗಿದೆ.

    ReplyDelete
  3. thank u so much Badari bro N thanks a lot Veena Bhat avre , ur comments are very valuable for me.

    ReplyDelete