Wednesday 27 July 2011

ಸುಖಬಾಳ್ವೆಗೆ ಕಿವಿಮಾತು




ಬಾಳಿ ಬದುಕಬೇಕೆಂಬಾಸೆ ಇದ್ದಲ್ಲಿ
ಹೂಡಿರಿ ಮೋಸದ ತಂತ್ರವ
ಆಗ ನೋಡಿರಿ ನಿಮ್ಮ ಕಷ್ಟಗಳೆಲ್ಲ
ಮಂಜಿನಂತೆ ಕರಗಿ ಹೋಗುತ್ತದೆ !
ಸತ್ಯಹರಿಶ್ಚಂದ್ರನಂತೆ ನಡೆದಿರೋ
ಸತ್ಯಕ್ಕೆ ಬೆಲೆ ಇಲ್ಲವಿಲ್ಲಿ
ಗಾಂಧಿ ಮಹಾತ್ಮಾ ನಂತಾದಿರೋ
ಅಹಿಂಸೆಗೆ ನೆಲೆ ಇಲ್ಲವಿಲ್ಲಿ !
ನ್ಯಾಯಾ ನೀತಿಯ ದಾರಿಯಲ್ಲಿ
ನಡೆದರೆ ನಿಮಗೆ ಕಷ್ಟ-ನಷ್ಟಗಳೇ ಹೆಚ್ಚು
ಮೋಸ ಅಧರ್ಮದಿಂದ ನಡೆದರೆ
ಸುಳ್ಳಿನ ಸರಪಣಿಯ ಹೆಣೆದರೆ
ನೀವೂ ರಾಜ ರೋಷದಿಂದ
ಬದುಕು ನಡೆಸಬಹುದು !

No comments:

Post a Comment